ಅಹ್ಮದಾಬಾದ್: ಚೌತಿ ನಂತರ ಈಗ ಮುಸ್ಲಿಂರ ಹಬ್ಬವಾದ ಬಕ್ರೀದ್ ಬಂದಿದೆ. ಬಕ್ರೀದ್ ಎಂದಾಕ್ಷಣ ಪ್ರತಿಯೊಬ್ಬರೂ ಅದರ ಮಹತ್ವವನ್ನು ಅಂದಾಜಿಸಬಹುದು. ಮೇಕೆಗಳ ಬಲಿ ಕೊಡುವುದೇ ಅದರ ವಿಶೇಷತೆ. ಆದರೆ ಅಹ್ಮದಾಬಾದ್ನ ಪ್ರಾಣಿಪ್ರಿಯರ ಒಂದು ಗುಂಪು ಮತ್ತು ಅದರ ಕಾರ್ಯಕರ್ತರು ಈ ಮೇಕೆಗಳನ್ನು ಮಂಡಿಗಳಿಂದ ಹರಾಜಿನ ಮೂಲಕ ಅವುಗಳ ಬಲಿ ಪಡೆಯುವುದರಿಂದ ರಕ್ಷಿಸುವಂತಹ ಉದಾತ್ತ ಕಾರ್ಯವೊಂದನ್ನು ರೂಪಿಸಿದ್ದಾರೆ.
’ಶ್ರೀ ಜೈನ ಶ್ವೇತಾಂಬರ ಮೂರ್ತಿ ಪೂಜಕ ಯುವಕ ಮಹಾಸಂಘ’ ಎಂಬ ಹೆಸರಿನ ಈ ಸಂಸ್ಥೆಯು ಅಹ್ಮದಾಬಾದ್, ಚೆನ್ನೈ, ಬೆಂಗಳೂರು, ಪುಣೆ ಮೊದಲಾದೆಡೆಗಳಲ್ಲಿ ಹಬ್ಬಕ್ಕೂ ಮುನ್ನ ಮೇಕೆಗಳನ್ನು ರಕ್ಷಿಸುವಂತೆ ಜನರಿಗೆ ಪ್ರೇರೇಪಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ಮೇಕೆಗಳ ಬಲಿ ಪಡೆಯುವುದನ್ನು ತಡೆಯುವುದು ಇದರ ಉದ್ದೇಶ. ಈ ವರ್ಷ ಕಲೋಲ್ನ ಪಂಜ್ರಾಪೊಲ್ ಮೇಕೆಗಳ ಕೊಟ್ಟಿಗೆಗೆ ಈವರೆಗೆ ಸುಮಾರು 450 ಮೇಕೆಗಳನ್ನು ಸಾಗಿಸುವ ಮೂಲಕ ಅವುಗಳನ್ನು ರಕ್ಷಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಭದ್ರೇಶ್ ಜೆಶಿಂಗ್ ಭಾಯ್ ಶಾ ಹೇಳುತ್ತಾರೆ.
ಜೈನ ಧರ್ಮೀಯರಾದ ಇವರು ’ಜೀವದಯಾ’ ಅಥವಾ ಪ್ರಾಣಿಗಳ ಮೇಲೆ ಅನುಕಂಪ ತೋರುವ ವಿಶೇಷ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಬಕ್ರೀದ್ಗೂ ಮುನ್ನ ಮೇಕೆಗಳ ರಕ್ಷಣೆಯ ಕಾರ್ಯದಲ್ಲಿ ತೊಡಗುತ್ತಿದ್ದು, ಸಂಸ್ಥೆಯು ಕಳೆದ 10 ವರ್ಷಗಳಿಂದ ಈ ಕಾರ್ಯ ಮಾಡುತ್ತಿದೆ. ಆದರೆ ಈ ಬಾರಿ ವಾಟ್ಸ್ಆ್ಯಪ್ ನ ಸಂದೇಶದ ಸಹಾಯದಿಂದ ಜನರು ದಂಡು ದಂಡಾಗಿ ಈ ಸಂಸ್ಥೆಯೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ. ’ಮಂಡಿಯಿಂದ 2700 ರೂಪಾಯಿಗೆ ಒಂದರಂತೆ ಮೇಕೆಗಳನ್ನು ಖರೀದಿಸಿ ಕೊಟ್ಟಿಗೆಗೆ ರವಾನಿಸಿ ಜೀವ ಉಳಿಸಲಾಗುವುದು’ ಎಂಬ ಒಂದು ಕಿರು ಸಂದೇಶ ರವಾನಿಸಲಾಗಿತ್ತು. ಇದರಿಂದಾಗಿ ಭಾರತದ ವಿವಿಧೆಡೆಗಳಿಂದ ದೇಣಿಗೆಗಳ ಮಹಾಪೂರವೇ ಹರಿದು ಬಂದಿದೆ ಎನ್ನುತ್ತಾರೆ ಭದ್ರೇಶ್.
ಮೇಕೆಯೊಂದನ್ನು ಸಾಮಾನ್ಯವಾಗಿ ರೂ.1800ಕ್ಕೆ ಖರೀದಿಸಲ್ಪಟ್ಟರೆ ಅದರ ಪೋಷಣೆ ಹಾಗೂ ನಿರ್ವಹಣೆಗೆ ರೂ.900 ವೆಚ್ಚವಾಗಿದೆ. ಒಟ್ಟಾರೆ 2700 ರೂ.ಗಳನ್ನು ಪಡೆಯುತ್ತಿದ್ದಾರೆ. ಮಂಡಿಯಿಂದ ಹಣ ಪಾವತಿಸಿ ಮೇಕೆಗಳನ್ನು ಖರೀದಿಸುವುದರಿಂದ ಈವರೆಗೆ ಯಾವುದೇ ವಿವಾದ, ಗೊಂದಲಗಳು ಮೂಡಲಿಲ್ಲ ಎಂದು ಕಾರ್ಯಕರ್ತ ಸಂಜಯ್ ದೋಶಿ ಹೇಳುತ್ತಾರೆ.
ಇವುಗಳ ರಕ್ಷಣೆಯ ಸಲುವಾಗಿ ಸಂಸ್ಥೆಯು ಅಹ್ಮದಾಬಾದ್ನ ಎರಡು ಸಮುದಾಯ ಕೇಂದ್ರಗಳಲ್ಲಿ ಆಧ್ಯಾತ್ಮಿಕ ಸಭೆ ನಡೆಸಲು ನಿರ್ಧರಿಸಿದೆ. ಶುಕ್ರವಾರದಂದು ಈ ಸಭೆಯಲ್ಲಿ ಸುಮಾರು 5000 ಮಂದಿ ಸೇರಲಿದ್ದು, ಎಣ್ಣೆ ಅಥವಾ ಮಸಾಲೆ ಪದಾರ್ಥಗಳನ್ನು ಬಳಸದೆ ಆಹಾರ ತಯಾರಿಸಿ ಸಾಮೂಹಿಕ ಊಟೋಪಚಾರ ನಡೆಯಲಿದೆ. ಅಲ್ಲದೆ ಪ್ರಾಣಿಗಳ ಆತ್ಮಕ್ಕೆ ಶಾಂತಿ ದೊರಕುವಂತೆ ಪ್ರಾರ್ಥನೆ ನಡೆಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.