ಕಠ್ಮಂಡು: ನೇಪಾಳದಲ್ಲಿ ಬುಧನೀಲಕಂಠ ಧರ್ಮಶಾಲಾವನ್ನು ಭಾರತ ಸರ್ಕಾರದ 5 ಕೋಟಿ ರೂಪಾಯಿ ಅನುದಾನದ ನೆರವಿನೊಂದಿಗೆ ನಿರ್ಮಿಸಲಾಗಿದೆ. ಇದನ್ನು ಕಠ್ಮಂಡು ಕಣಿವೆಯ ಬುಧನೀಲಕಂಠ ಪುರಸಭೆಯಲ್ಲಿ ಬುಧವಾರ ನೇಪಾಳದ ಉಪಾಧ್ಯಕ್ಷ ರಾಮ್ ಸಹಾಯ್ ಪ್ರಸಾದ್ ಯಾದವ್ ಅವರು ಉದ್ಘಾಟನೆಗೊಳಿಸಿದರು.
ನೇಪಾಳದ ಸಾಂಸ್ಕೃತಿಕ ಪರಂಪರೆಯ ವಲಯದಲ್ಲಿ ಭೂಕಂಪದ ನಂತರದ ಪುನರ್ನಿರ್ಮಾಣ ಅನುದಾನದ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. 2015ರ ಗೂರ್ಖಾ ಭೂಕಂಪದ ವೇಳೆ ಹಾನಿಗೀಡಾದ ಧರ್ಮಶಾಲಾ ಕಟ್ಟಡವನ್ನು ಈಗ ಪುನರ್ ನಿರ್ಮಾಣ ಮಾಡಲಾಗಿದೆ. ಹೊಸ ಮೂರೂವರೆ ಅಂತಸ್ತಿನ ಧರ್ಮಶಾಲೆಯು ನೇಪಾಳದ ಅತ್ಯಂತ ಗೌರವಾನ್ವಿತ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬುಧನೀಲಕಂಠ ದೇವಾಲಯಕ್ಕೆ ಭೇಟಿ ನೀಡುವ ಸಾವಿರಾರು ಯಾತ್ರಿಕರಿಗೆ ಅತಿಥಿ ಗೃಹವಾಗಿ ಸೇವೆ ಸಲ್ಲಿಸುತ್ತದೆ.
ಈ ವೇಳೆ ಮಾತನಾಡಿದ ನೇಪಾಳ ಉಪಾಧ್ಯಕ್ಷರು, ಭೂಕಂಪದ ನಂತರದ ಪುನರ್ನಿರ್ಮಾಣಕ್ಕಾಗಿ ಭಾರತ ಸರ್ಕಾರದ ಬೆಂಬಲವನ್ನು ಶ್ಲಾಘಿಸಿದರು.
ನೇಪಾಳದ ಏಳು ಜಿಲ್ಲೆಗಳಲ್ಲಿ 28 ಸಾಂಸ್ಕೃತಿಕ ಪರಂಪರೆಯ ತಾಣಗಳ ಸಂರಕ್ಷಣೆಯನ್ನು ಕೈಗೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ. ಇವುಗಳ ಜೊತೆಗೆ, ಭೂಕಂಪದ ನಂತರದ ಪುನರ್ನಿರ್ಮಾಣ ಅನುದಾನದ ಅಡಿಯಲ್ಲಿ, ಭಾರತ ಸರ್ಕಾರವು ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ 50000 ಖಾಸಗಿ ಮನೆಗಳ ಪುನರ್ನಿರ್ಮಾಣ, 8 ಜಿಲ್ಲೆಗಳಲ್ಲಿ 71 ಶಿಕ್ಷಣ ಸಂಸ್ಥೆಗಳ ಪುನರ್ನಿರ್ಮಾಣ ಮತ್ತು ನೇಪಾಳದ 10 ಜಿಲ್ಲೆಗಳಲ್ಲಿ 132 ಆರೋಗ್ಯ ಸೌಲಭ್ಯಗಳ ಪುನರ್ನಿರ್ಮಾಣವನ್ನು ಬೆಂಬಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.