ನವದೆಹಲಿ: ಕೆನಡಾದಲ್ಲಿರುವ ನೂರಾರು ಭಾರತೀಯ ವಿದ್ಯಾರ್ಥಿಗಳು ಗಡಿಪಾರು ಭೀತಿಯನ್ನು ಎದುರಿಸುತ್ತಿದ್ದಾರೆ. ಕೆನಡಾದ ವಿಶ್ವವಿದ್ಯಾಲಯಗಳಿಗೆ ನಕಲಿ ಪ್ರವೇಶ ಪತ್ರ ಪಡೆದು ವೀಸಾ ಪಡೆದ ಆರೋಪದ ಮೇರೆಗೆ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಕೆನಡಾದ ಅಧಿಕಾರಿಗಳು ಹೇಳಿದ್ದಾರೆ. ಇವರಲ್ಲಿ ಬಹುತೇಕ ಪಂಜಾಬ್ ಮೂಲದ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.
ಹೀಗಾಗಿ ಗಡಿಪಾರು ಮಾಡುವ ಸಾಧ್ಯತೆಯನ್ನು ವಿರೋಧಿಸಿ ನೂರಾರು ಭಾರತೀಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿ (CBSA) ಇತ್ತೀಚೆಗೆ ಸುಮಾರು 700 ಭಾರತೀಯ ವಿದ್ಯಾರ್ಥಿಗಳಿಗೆ ಗಡೀಪಾರು ಪತ್ರಗಳನ್ನು ನೀಡಿದೆ. ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ನಕಲಿ ಎಂದು ಸಿಬಿಎಸ್ಎ ಪತ್ತೆ ಮಾಡಿದ ನಂತರ ಪತ್ರಗಳನ್ನು ನೀಡಲಾಗಿದೆ.
ಹಲವು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಾವು 2018ರಲ್ಲಿ ಕೆನಡಾಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದರೂ, ಐದು ವರ್ಷಗಳ ನಂತರ ಖಾಯಂ ನಿವಾಸಕ್ಕೆ ಅರ್ಜಿ ಸಲ್ಲಿಸಿದಾಗಲೇ ನಕಲಿ ಪತ್ರಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.
“ನಾವು ಕೆನಡಾಕ್ಕೆ ಆಗಮಿಸಿದಾಗ ನಮ್ಮ ಏಜೆಂಟ್ ನಮಗೆ ಪ್ರವೇಶ ಪತ್ರಗಳನ್ನು ಪಡೆದ ಕಾಲೇಜುಗಳಲ್ಲಿ ಸೀಟುಗಳು ತುಂಬಿವೆ ಎಂದು ತಿಳಿಸಿದ್ದರು. ವಿಶ್ವವಿದ್ಯಾಲಯಗಳು ಹೆಚ್ಚು ಬುಕ್ಕಿಂಗ್ ಮಾಡುತ್ತಿವೆ ಆದ್ದರಿಂದ ಅವರು ನಮ್ಮನ್ನು ಬೇರೆ ಕಾಲೇಜಿಗೆ ವರ್ಗಾಯಿಸುತ್ತೇವೆ ಎಂದಿದ್ದರು. ನಾವು ವಿದ್ಯಾಭ್ಯಾಸ ಕಳೆದುಕೊಳ್ಳಲು ಬಯಸದ ಕಾರಣ ಅವರು ಹೇಳಿದ್ದಕ್ಕೆ ಒಪ್ಪಿಕೊಂಡೆವು” ಎಂದು ಪ್ರತಿಭಟನಾನಿರತ ವಿದ್ಯಾರ್ಥಿ ಚಮನ್ದೀಪ್ ಸಿಂಗ್ ಹೇಳಿದ್ದಾರೆ.
“ನಾವು ಕಾಲೇಜನ್ನು ಬದಲಾಯಿಸಿದ್ದೇವೆ ಮತ್ತು ನಮ್ಮ ಅಧ್ಯಯನವನ್ನು ಮುಗಿಸಿದ್ದೇವೆ ಆದರೆ ಮೂರು-ನಾಲ್ಕು ವರ್ಷಗಳ ನಂತರ, ನಮ್ಮ ವೀಸಾಗಳನ್ನು ಪಡೆಯಲು ಸಲ್ಲಿಸಿದ್ದ ಪ್ರವೇಶ ಪತ್ರವು ನಕಲಿ ಎಂದು CBSA ನಮಗೆ ತಿಳಿಸಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.