ಮುಂಬಯಿ: ಜುಲೈ 2006ರಂದು ಸಂಭವಿಸಿದ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳ ಪೈಕಿ 8 ಆರೋಪಿಗಳಿಗೆ ಮರಣದಂಡನೆ ನೀಡಿ ಕಾನೂನು ಜರುಗಿಸುವಂತೆ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಕೋರಿದ್ದಾರೆ. ಇನ್ನುಳಿದ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ನೀಡಲು ಅವರು ಆಗ್ರಹಿಸಿದ್ದಾರೆ. ಈ ದುರಂತದಲ್ಲಿ 189 ಮಂದಿ ಸಾವನ್ನಪ್ಪಿ 800 ಮಂದಿ ಗಾಯಗೊಂಡಿದ್ದರು.
12 ಮಂದಿ ಮುಂಬಯಿಯ ಸ್ಥಳೀಯ ರೈಲುಗಳಲ್ಲಿ ಬಾಂಬ್ಗಳನ್ನು ಹೂಡುವ, ಭಯೋತ್ಪಾದಕ ಚಟುವಟಿಕೆ ಮತ್ತು ಸಾಮೂಹಿಕ ಹತ್ಯೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿತ್ತು. ಈ 12 ಮಂದಿ ಆರೋಪಿಗಳನ್ನು ಬಾಂಬ್ಗಳನ್ನು ಹೂಡುವ, ಸಾಗಿಸುವ, ಭಯೋತ್ಪಾದಕರಿಗೆ ಆಶ್ರಯ ನೀಡುವುದು ಮುಂತಾದ ಆರೋಪದ ಮೇಲೆ ಬಂಧಿಸಲಾಗಿತ್ತು. ಆರ್ಡಿಎಕ್ಸ್ಗಳನ್ನು ಪ್ರೆಷರ್ ಕುಕರ್ಗಳ ಸಹಾಯದಿಂದ ಸ್ಫೋಟಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.