ರಾಯ್ಪುರ: ಛತ್ತೀಸ್ಗಢ ರಾಯ್ಗಢದ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಗುರುವಾರದಿಂದ ‘ರಾಷ್ಟ್ರೀಯ ರಾಮಾಯಣ ಉತ್ಸವ’ವನ್ನು ಆಯೋಜಿಸಲಾಗಿದೆ
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಸಮಾರಂಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ, ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಛತ್ತೀಸ್ಗಢ ರಾಮ ದೇವರೊಂದಿಗೆ ಹೊಂದಿರುವ ಆಳವಾದ ಸಂಪರ್ಕವನ್ನು ಎತ್ತಿ ತೋರಿಸಿದರು. ಕಾರ್ಯಕ್ರಮದ ನಿಮಿತ್ತ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾರ್ಯಕ್ರಮದಲ್ಲಿ 12 ರಾಜ್ಯಗಳು ಮತ್ತು ವಿದೇಶಗಳಿಂದ 270 ಕಲಾವಿದರು ಭಾಗವಹಿಸುತ್ತಿದ್ದಾರೆ.
ಭಗವಾನ್ ರಾಮ ಎಲ್ಲರಿಗೂ ಸೇರಿದವನು ಎಂದು ಹೇಳಿದ ಸಿಎಂ ಬಘೇಲ್, ರಾಮನ ‘ನಿರಾಕಾರ’ (ಅಮರ) ಮತ್ತು ‘ಸಾಕಾರ’ ರೂಪದ ಬಗ್ಗೆ ಉಲ್ಲೇಖಿಸಿದರು. ಛತ್ತೀಸ್ಗಢವು ಶ್ರೀರಾಮನ ತಾಯಿ ಕೌಶಲ್ಯ ಮತ್ತು ಭಕ್ತೆ ಶಬರಿಯ ನಾಡು ಎಂದು ಅವರು ಉಲ್ಲೇಖಿಸಿದ್ದಾರೆ.
ಸಿಎಂ ಬಘೇಲ್ ತಮ್ಮ ಭಾಷಣದಲ್ಲಿ ಭಗವಾನ್ ರಾಮನು ಎದುರಿಸಿದ ವಿವಿಧ ಸವಾಲುಗಳ ಬಗ್ಗೆ ಒತ್ತಿಹೇಳಿದರು, ಆದರೆ ರಾಮ ಎಂದಿಗೂ ತನ್ನ ಘನತೆಯ ಜೊತೆ ರಾಜಿ ಮಾಡಿಕೊಳ್ಳಲಿಲ್ಲ ಎಂದರು. ಅಲ್ಲದೇ ವನವಾಸದ ಮಹತ್ವದ 14 ವರ್ಷಗಳ ಅವಧಿಯಲ್ಲಿ 10 ವರ್ಷಗಳನ್ನು ರಾಮ ಛತ್ತೀಸ್ಗಢದಲ್ಲಿ ಕಳೆದರು, ಹೀಗಾಗಿ ಛತ್ತೀಸ್ಗಢದೊಂದಿಗೆ ರಾಮನಿಗೆ ಆಳವಾದ ಸಂಪರ್ಕವಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.