ಶ್ರೀನಗರ: ಕಾಶ್ಮೀರದ ಪ್ರಶಾಂತ ಕಣಿವೆಯು ಇಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು, ಮೊದಲ ಬಾರಿಗೆ ಕಾಶ್ಮೀರಿಗರು ನಿರ್ಮಾಣ ಮಾಡಿದ ಬಾಲಿವುಡ್ ಚಲನಚಿತ್ರ, “ವೆಲ್ಕಮ್ ಟು ಕಾಶ್ಮೀರ್” ಶ್ರೀನಗರದ ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನವನ್ನು ಕಂಡಿತು. ಒಂದು ವರದಿಯ ಪ್ರಕಾರ, ಸ್ಥಳೀಯ ಪ್ರೇಕ್ಷಕರು ಅಗಾಧ ಉತ್ಸಾಹದಿಂದ ಸಿನಿಮಾಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಥಿಯೇಟರ್ ಸಂಪೂರ್ಣ ಭರ್ತಿಯಾಗಿತ್ತು. ಈ ಮೂಲಕ ಸ್ಥಳಿಯರೇ ನಿರ್ಮಾಣ ಮಾಡಿ ಅಭಿನಯಿಸಿದ ಸಿನಿಮಾವನ್ನು ತೆರೆದ ಬಾಹುಗಳಿಂದ ಕಾಶ್ಮೀರಿಗರು ಅಪ್ಪಿಕೊಂಡಿದ್ದಾರೆ.
ಕಾಶ್ಮೀರದ ಜನರು, ವಿಶೇಷವಾಗಿ ಯುವಜನರು ಎದುರಿಸುತ್ತಿರುವ ಸವಾಲುಗಳನ್ನು ಬೆಳಕಿಗೆ ತರುವ ಕಥಾಹಂದರದ ಸಿನಿಮಾ ಪ್ರೇಕ್ಷಕರನ್ನು ತಟ್ಟಿದೆ ಮತ್ತು ಅವರಿಂದ ವ್ಯಾಪಕ ಬೆಂಬಲವನ್ನು ಗಳಿಸಿದೆ. “ಈ ಚಿತ್ರವು ನಿಜವಾಗಿಯೂ ನಮ್ಮನ್ನು ಪ್ರತಿನಿಧಿಸುತ್ತದೆ. ನಟರು ಕಾಶ್ಮೀರದವರು ಮತ್ತು ಅಂತಹ ವೇದಿಕೆಯಲ್ಲಿ ಅವರ ಪ್ರತಿಭೆಯನ್ನು ಪ್ರದರ್ಶಿಸಿದ್ದು ಅದ್ಭುತವಾಗಿದೆ” ಎಂದು ಒಬ್ಬ ಕಾಶ್ಮೀರಿಗ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಚಲನಚಿತ್ರವು ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟ ಸಾಮಾಜಿಕ ಸಮಸ್ಯೆಗಳನ್ನು ಒತ್ತಿಹೇಳುತ್ತದೆ, ಕಾಶ್ಮೀರದ ಜನರು ಎದುರಿಸುತ್ತಿರುವ ವಾಸ್ತವಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಲನಚಿತ್ರವು ಸಮಾಜದ ಒಳಿತಿಗಾಗಿ ನಿರ್ಣಾಯಕ ಚರ್ಚೆಯನ್ನು ಹುಟ್ಟುಹಾಕುತ್ತದೆ ಎಂಬ ಭರವಸೆಯನ್ನು ಒತ್ತಿ ಹೇಳುತ್ತದೆ. “ಈ ಚಲನಚಿತ್ರವು ಈ ಪ್ರಮುಖ ವಿಷಯಗಳ ಕುರಿತು ಚರ್ಚೆ ಹುಟ್ಟುಹಾಕುತ್ತದೆ ಮತ್ತು ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ನಾವು ನಂಬುತ್ತೇವೆ” ಎಂದು ಸಿನಿಮಾ ತಂಡ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.