ಛತ್ತೀಸಗಡ : ಮಹಿಳೆಯರು ಉದ್ಯೋಗಸ್ಥರಾಗಿರುವುದೇ ನಿರುದ್ಯೋಗ ಹೆಚ್ಚಾಗಲು ಕಾರಣವಂತೆ ! ಇಂತಹ ಪ್ರಮಾದವೊಂದು ಛತ್ತೀಸ್ಗಢದಲ್ಲಿ ನಡೆದಿದೆ. ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಲಾಗಿದೆ.
ಸ್ವಾತಂತ್ರ್ಯಾನಂತರ ನಿರುದ್ಯೋಗ ಹೆಚ್ಚಾಗಲು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಮಹಿಳಾ ಸಬಲೀಕರಣ, ಉದ್ಯೋಗಿಕರಣ ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಇಂತಹ ಸಮಯದಲ್ಲಿ ಪ್ರೌಢಶಿಕ್ಷಣ ಮಂಡಳಿಯ ಶಾಲಾ ಪಠ್ಯಪುಸ್ತಕದಲ್ಲಿ ಈ ರೀತಿ ಕಾರಣಗಳನ್ನು ನೀಡಿರುವುದು ವಿಷಾದಕರ.
ಈ ವಿಚಾರದ ವಿರುದ್ಧ ಜಸ್ಪುರ್ ಜಿಲ್ಲೆಯ ಶಿಕ್ಷಕಿಯೋರ್ವರು ರಾಜ್ಯ ಮಹಿಳಾ ಆಯೋಗಕ್ಕೆ ದೂರುಸಲ್ಲಿಸಿದ್ದು, ಮಹಿಳಾ ಆಯೋಗವು ಈ ವಿಚಾರವನ್ನು ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಗಮನಕ್ಕೆ ತಂದಿದೆ.
ಇಂತಹ ಪ್ರಕರಣ ಇದೇ ಮೊದಲಲ್ಲ
2014ರಲ್ಲಿ ಪಶ್ಚಿಮ ಬಂಗಾಳದ 8ನೇ ತರಗತಿಯ ಇತಿಹಾಸದ ಪಠ್ಯಪುಸ್ತಕದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಭಯೋತ್ಪಾದಕರು ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ 2013 ರಲ್ಲಿ ಭಾರತದ ಭೌಗೋಳಿಕ ನಕ್ಷೆಯಿಂದ ಅರುಣಾಚಲವನ್ನು ಹೊರತು ಪಡಿಸಿದ ನಕ್ಷೆಯನ್ನು ಮುದ್ರಿಸಿದ ಕಾರಣಕ್ಕಾಗಿ 10ನೇ ತರಗತಿಯ ಎಲ್ಲಾ ಪುಸ್ತಕಗಳನ್ನೂ ಹಿಂಪಡೆಯುವಂತೆ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿತ್ತು. 2012 ರಲ್ಲಿ ಸಿಬಿಎಸ್ಇ ಶಾಲೆಯ ಒಂದು ಪುಸ್ತಕದಲ್ಲಿ ಮಾಂಸಾಹಾರಿಗಳು ಸುಳ್ಳು ಹೇಳುವವರು, ಮೋಸ ಮತ್ತು ಅಪರಾಧಗಳನ್ನು ಮಾಡುವವರು ಎಂದು ನಮೂದಿಸಲಾಗಿತ್ತು.
ವಿದ್ಯೆ, ವಿನಯ, ಜ್ಞಾನ ನೀಡುವ ಶಿಕ್ಷಣ ಸಂಸ್ಥೆಗಳು ಹಳಿತಪ್ಪಿದರೆ ಯುವ ಜನಾಂಗಕ್ಕೆ ದಿಕ್ಕು ತೋರಿಸುವ ಕೆಲಸ ಯಾರು ಮಾಡಬೇಕೆಂಬುದು ಯಕ್ಷಪ್ರಶ್ನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.