ಮಂಗಳೂರು: ಸರ್ಟಿಫಿಕೇಶನ್ ವೆರಿಫಿಕೇಶನ್ಗೆ ವಿಧಿಸುವ ಶುಲ್ಕವನ್ನು ಕಡಿಮೆ ಮಾಡುವಂತೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳ ಪರವಾಗಿ ಕುಲಪತಿಗಳಿಗೆ ಬೈಂದೂರಿನ ನೂತನ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮನವಿಯನ್ನು ಸಲ್ಲಿಸಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ಕಲಿತ ಪ್ರತಿಯೊಬ್ಬರು ಕೆಲಸಕ್ಕೆ ಸೇರಲು ಸರ್ಟಿಫಿಕೇಟ್ ಅನ್ನು ವೆರಿಫಿಕೇಶನ್ ಮಾಡುವ ಅಗತ್ಯವಿರುತ್ತದೆ. ಬೇರೆ ಬೇರೆ ಯೂನಿವರ್ಸಿಟಿಗಳು ಈ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಶುಲ್ಕ ಅಳವಡಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲಿಯೇ ಮಂಗಳೂರು ವಿಶ್ವವಿದ್ಯಾಲಯ ಅತ್ಯಂತ ಹೆಚ್ಚು ಅಂದರೆ ಪ್ರತಿ ಮಾರ್ಕ್ಸ್ ಕಾರ್ಡಿಗೆ ಸುಮಾರು ರೂಪಾಯಿ 1,500 ರಷ್ಟು ಶುಲ್ಕವನ್ನು ವಿಧಿಸುತ್ತದೆ. ಅಂದರೆ ಆರು ಸಬ್ಜೆಕ್ಟ್ ಗಳನ್ನು ಕಲಿತ ಒಬ್ಬ ವಿದ್ಯಾರ್ಥಿಯು ಆರು ಮಾರ್ಕ್ಸ್ ಕಾರ್ಡ್ಗಳನ್ನು ವೆರಿಫಿಕೇಶನ್ ಮಾಡಲು ಸುಮಾರು ರೂ. 9,000 ಮೂಲ ಶುಲ್ಕ ಮತ್ತು ಇತರ ಶುಲ್ಕದ ಜೊತೆ ಸುಮಾರು ರೂ. 10,800 ಕಟ್ಟಬೇಕಾಗುತ್ತದೆ ಎಂದು ಟ್ವಿಟ್ ಮಾಡಿದ್ದಾರೆ.
ಅಲ್ಲದೇ ದುಬಾರಿ ಶುಲ್ಕ ಕರಾವಳಿ ಭಾಗದ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಬಡವರ ಮನೆಯ ಮಕ್ಕಳಿಗೆ ಇದು ತುಂಬಾ ಕಷ್ಟ ಸಾಧ್ಯ. ರಾಜ್ಯದಲ್ಲಿ ಅತ್ಯಂತ ಕಡಿಮೆ ಅಂದರೆ ತುಮಕೂರು ವಿಶ್ವವಿದ್ಯಾನಿಲಯವು ಆರು ಮಾರ್ಕ್ಸ್ ಕಾರ್ಡಿಗೆ ಕೇವಲ ರೂ. 501 ಒಟ್ಟು ಶುಲ್ಕ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
ತಕ್ಷಣವೇ ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಉತ್ತಮ ನಿರ್ಧಾರವನ್ನು ತೆಗೆದುಕೊಂಡು ವಿಶ್ವವಿದ್ಯಾನಿಲಯದಲ್ಲಿ ಕಲಿತ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಮಾಡಬೇಕೆಂದು ವಿನಂತಿಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳ ಪರವಾಗಿ @MangaloreUniv ಯ ಕುಲಪತಿಗಳಿಗೆ ಒಂದು ಮನವಿ.
ವಿಶ್ವವಿದ್ಯಾನಿಲಯದಲ್ಲಿ ಕಲಿತ ಪ್ರತಿಯೊಬ್ಬರು ಕೆಲಸಕ್ಕೆ ಸೇರಲು ಸರ್ಟಿಫಿಕೇಟ್ ಅನ್ನು ವೆರಿಫಿಕೇಶನ್ ಮಾಡುವ ಅಗತ್ಯವಿರುತ್ತದೆ.
1/4 pic.twitter.com/1JRRl55GFv
— Gururaj Gantihole (@gantihole) May 18, 2023
ಬೇರೆ ಬೇರೆ ಯೂನಿವರ್ಸಿಟಿಗಳು ಈ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಶುಲ್ಕ ಅಳವಡಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲಿಯೇ ಮಂಗಳೂರು ವಿಶ್ವವಿದ್ಯಾಲಯ ಅತ್ಯಂತ ಹೆಚ್ಚು ಅಂದರೆ ಪ್ರತಿ ಮಾರ್ಕ್ಸ್ ಕಾರ್ಡಿಗೆ ಸುಮಾರು ರೂಪಾಯಿ 1,500 ರಷ್ಟು ಶುಲ್ಕವನ್ನು ವಿಧಿಸುತ್ತಿದೆ.@MangaloreUniv
2/4— Gururaj Gantihole (@gantihole) May 18, 2023
6 ಸಬ್ಜೆಕ್ಟ್ ಗಳನ್ನು ಕಲಿತ ಒಬ್ಬ ವಿದ್ಯಾರ್ಥಿಯು 6 ಮಾರ್ಕ್ಸ್ ಕಾರ್ಡ್ ವೆರಿಫಿಕೇಶನ್ ಮಾಡಲು ರೂ. 9,000 ಮೂಲ ಶುಲ್ಕ & ಇತರ ಶುಲ್ಕದ ಜೊತೆ ಸುಮಾರು ರೂ. 10,800 ಕಟ್ಟಬೇಕಾಗುತ್ತದೆ.
ಇದು ಕರಾವಳಿ ಭಾಗದ & ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಬಡವರ ಮನೆಯ ಮಕ್ಕಳಿಗೆ ಇದು ತುಂಬಾ ಕಷ್ಟ ಸಾಧ್ಯ.
3/4— Gururaj Gantihole (@gantihole) May 18, 2023
. @gantihole ಅವರು ಒಳ್ಳೆಯ ಪ್ರಶ್ನೆ ಎತ್ತಿದ್ದಾರೆ. @MangaloreUniv ಈ ಕುರಿತಂತೆ ಗಮನ ಹರಿಸುವುದೊಳಿತು. https://t.co/Pg1taWl2O6
— Chakravarty Sulibele (@astitvam) May 18, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.