ನವದೆಹಲಿ: ಉತ್ತರಾಖಂಡದಲ್ಲಿ ಇಂದು ಬೆಳಗ್ಗೆ 7.10ಕ್ಕೆ ಶ್ರೀ ಬದರಿನಾಥ ಧಾಮದ ಪವಿತ್ರ ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಯಿತು. ವೈದಿಕ ಸ್ತೋತ್ರ ಪಠಣಗಳ ನಡುವೆ ದ್ವಾರಗಳನ್ನು ತೆರೆಯಲಾಯಿತು. ಧಾಮವನ್ನು ಸೂರ್ಯಕಾಂತಿ ಹೂವಿನಿಂದ ಅಲಂಕರಿಸಲಾಗಿತ್ತು. ಅರ್ಚಕರಿಂದ ಮೊದಲ ಪೂಜೆ ನೆರವೇರಿತು.
ವರದಿಗಳ ಪ್ರಕಾರ, ಧಾಮದ ದ್ವಾರಗಳನ್ನು ತೆರೆಯುವ ಮೊದಲು ಲಘು ಹಿಮಪಾತವು ಪ್ರಾರಂಭವಾಯಿತು. ಶ್ರೀ ಬದರಿನಾಥನ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ನಿನ್ನೆ ರಾವಲ್ ನೇತೃತ್ವದ ಶಂಕರಾಚಾರ್ಯ ಗಡ್ಡಿ, ಉದ್ಧವ್ ಭಗವಾನ್, ಕುಬೇರ್, ಗಾಡು ಘಡ ಮತ್ತು ತೇಲ್ ಕಲಶ ಪಾಂಡುಕೇಶ್ವರದಿಂದ ಬದರಿನಾಥ ತಲುಪಿತು. ಎಲ್ಲಾ ನಾಲ್ಕು ಧಾಮಗಳ (ಚಾರ್ ಧಾಮ್) ದ್ವಾರಗಳು ಈಗ ತೀರ್ಥಯಾತ್ರೆಗಾಗಿ ತೆರೆದಿವೆ. ಗಂಗೋತ್ರಿ ಧಾಮ ಮತ್ತು ಯಮುನೋತ್ರಿ ಧಾಮದ ದ್ವಾರಗಳನ್ನು ಈ ತಿಂಗಳ 22 ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ತೆರೆಯಲಾಗಿದ್ದು, ಕೇದಾರನಾಥ ಧಾಮದ ದ್ವಾರಗಳನ್ನು ಭಕ್ತರಿಗಾಗಿ ಏಪ್ರಿಲ್ 25 ರಂದು ತೆರೆಯಲಾಗಿದೆ. ಶ್ರೀ ಬದರಿನಾಥ ಧಾಮಕ್ಕೆ ಬರುವ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಆಡಳಿತವು ಸಾಕಷ್ಟು ವ್ಯವಸ್ಥೆಯನ್ನು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.