ನವದೆಹಲಿ: ಗೌತಮ ಬುದ್ಧನ ಉದಾತ್ತ ಬೋಧನೆಗಳು ಶತಮಾನಗಳಿಂದ ಅಸಂಖ್ಯಾತ ಜನರ ಮೇಲೆ ಪ್ರಭಾವ ಬೀರಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಬುದ್ಧ ವ್ಯಕ್ತಿಯನ್ನು ಮೀರಿದ ತಿಳುವಳಿಕೆ ಮತ್ತು ಬುದ್ಧ ರೂಪವನ್ನು ಮೀರಿದ ಚಿಂತನೆ. ಭಗವಾನ್ ಬುದ್ಧನ ಬೋಧನೆಗಳಿಂದ ಸ್ಫೂರ್ತಿ ಪಡೆದ ಭಾರತವು ಜಾಗತಿಕ ಕಲ್ಯಾಣಕ್ಕಾಗಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತಮ್ಮ ಸರ್ಕಾರವು ಭಗವಾನ್ ಬುದ್ಧನ ಮೌಲ್ಯಗಳನ್ನು ನಿರಂತರವಾಗಿ ಹರಡುತ್ತಿದೆ” ಎಂದು ಹೇಳಿದರು.
“ನಮ್ಮ ಸರ್ಕಾರವು ಭಾರತ ಮತ್ತು ನೇಪಾಳದಲ್ಲಿ ಬುದ್ಧ ಸರ್ಕ್ಯೂಟ್ ಅನ್ನು ಸುಧಾರಿಸಿದೆ. ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ ಅಥವಾ ಲುಂಬಿನಿಯಾಗಲಿ ಭಾರತ ಅಂತಾರಾಷ್ಟ್ರೀಯ ಬೌದ್ಧ ಸಂಸ್ಕೃತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಅವುಗಳನ್ನು ಸಾಧಿಸಲು ಭಾರತ ಸಮಗ್ರವಾಗಿ ಶ್ರಮಿಸುತ್ತಿದೆ” ಎಂದು ಹೇಳಿದರು.
ಈ ಅಮೃತ ಕಾಲ್ನಲ್ಲಿ ಭಾರತವು ಅನೇಕ ವಿಷಯಗಳ ಮೇಲೆ ಹೊಸ ಉಪಕ್ರಮಗಳನ್ನು ಕೈಗೊಂಡಿದೆ ಮತ್ತು ಇದಕ್ಕೆ ಅತ್ಯಂತ ದೊಡ್ಡ ಸ್ಫೂರ್ತಿ ಭಗವಾನ್ ಬುದ್ಧ. ಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆಯೇ ಹೊರತು ಯುದ್ಧವನ್ನಲ್ಲ. ಇಂದು ಜಗತ್ತು ಅನುಭವಿಸುತ್ತಿರುವ ಯುದ್ಧ ಮತ್ತು ಅಶಾಂತಿಗೆ ಬುದ್ಧ ಶತಮಾನಗಳ ಹಿಂದೆಯೇ ಪರಿಹಾರವನ್ನು ನೀಡಿದ್ದಾನೆ. ಭಗವಾನ್ ಬುದ್ಧನ ಮಾರ್ಗವೇ ಭವಿಷ್ಯದ ದಾರಿ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.