ನವದೆಹಲಿ: ಎನ್ಸಿಇಆರ್ಟಿ ಶಾಲಾ ಪುಸ್ತಕಗಳ ಪಠ್ಯಕ್ರಮದಲ್ಲಿ ಮಾಡಿರುವ ಹಲವಾರು ಬದಲಾವಣೆಗಳ ಕೆಲವರಿಂದ ವಿರೋಧಗಳು ವ್ಯಕ್ತವಾಗುತ್ತಿದೆ. ಅಲ್ಲದೇ NCERT 2002 ರ ಗುಜರಾತ್ ಗಲಭೆಗಳು, ಮಹಾತ್ಮ ಗಾಂಧಿ ಮತ್ತು ಕೆಲವು ಮೊಘಲ್ ಆಡಳಿತಗಾರರ ಹತ್ಯೆಯನ್ನು ಪಠ್ಯಪುಸ್ತಕಗಳಿಂದ ಕೈಬಿಟ್ಟಿದ್ದು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
NCERT ತನ್ನ ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ 25 ಹೊರಗಿನ ತಜ್ಞರು ಮತ್ತು 16 CBSE ಶಿಕ್ಷಕರನ್ನು ಸಂಪರ್ಕಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ವಿವಾದಕ್ಕೆ ತಣ್ಣೀರೆರೆಚುವ ಪ್ರಯತ್ನ ಮಾಡಿದೆ.
ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನ ಸೇರಿದಂತೆ ಏಳು ವಿಷಯಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ಕೇಂದ್ರ ಹೇಳಿದೆ.
ಕಳೆದ ವರ್ಷ, NCERT ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಲು 6 ರಿಂದ 12ನೇ ತರಗತಿಯ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಿತ್ತು. ಆದ್ದರಿಂದ, ಶಾಲಾ ಪಠ್ಯಪುಸ್ತಕ ಪ್ರಾಧಿಕಾರವು ಮೊಘಲರು, ಕೈಗಾರಿಕಾ ಕ್ರಾಂತಿ, ಶೀತಲ ಸಮರ ಮತ್ತು 2002ರ ಗುಜರಾತ್ ಗಲಭೆಗಳ ಅಧ್ಯಾಯಗಳನ್ನು ತೆಗೆದುಹಾಕಿತು. ಜತೆಗೆ ಕೆಲವು ದಲಿತ ಲೇಖಕರನ್ನು 7ನೇ ತರಗತಿಯ ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ.
ಐದು ತಜ್ಞರು – ಉಮೇಶ್ ಕದಮ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ ಮತ್ತು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ(ICHR) ಸದಸ್ಯ ಕಾರ್ಯದರ್ಶಿ; ಡಾ. ಅರ್ಚನಾ ವರ್ಮಾ, ಅಸೋಸಿಯೇಟ್ ಪ್ರೊಫೆಸರ್ (ಇತಿಹಾಸ), ಹಿಂದೂ ಕಾಲೇಜು, ದೆಹಲಿ ವಿಶ್ವವಿದ್ಯಾಲಯ (ಡಿಯು), ದೆಹಲಿ ಪಬ್ಲಿಕ್ ಸ್ಕೂಲ್ ಆರ್ ಕೆ ಪುರಂನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಶ್ರುತಿ ಮಿಶ್ರಾ ಮತ್ತು ದೆಹಲಿಯ ಇಬ್ಬರು ಕೇಂದ್ರೀಯ ವಿದ್ಯಾಲಯದ ಶಿಕ್ಷಕರು-ಕೃಷ್ಣ ರಂಜನ್ ಮತ್ತು ಸುನಿಲ್ ಕುಮಾರ್-ಇತಿಹಾಸ ಪಠ್ಯಕ್ರಮಕ್ಕಾಗಿ ಸಲಹೆ ಪಡೆಯಲಾಗಿದೆ ಎಂದು ಕೇಂದ್ರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.