ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಏರುತ್ತಿರುವ ಎಲ್ಪಿಜಿ ಬೆಲೆಗಳಿಂದ ನಿರಾಳತೆ ಒದಗಿಸುವ ಸಲುವಾಗಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 14.2 ಕೆಜಿ ಸಿಲಿಂಡರ್ಗೆ ವರ್ಷಕ್ಕೆ 12 ರೀಫಿಲ್ಗಳಿಗೆ 200 ರೂಪಾಯಿಗಳ ಸಬ್ಸಿಡಿಯನ್ನು ಅನುಮೋದಿಸಿದೆ.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, 2022-23ರ ಹಣಕಾಸು ವರ್ಷದಲ್ಲಿ ಇದರ ಒಟ್ಟು ವೆಚ್ಚ 6,100 ಕೋಟಿ ರೂಪಾಯಿಗಳು ಮತ್ತು 2023-24ರ ಹಣಕಾಸು ವರ್ಷದಲ್ಲಿ 7,680 ಕೋಟಿ ರೂಪಾಯಿಗಳು. ಈ ವರ್ಷದ ಮಾರ್ಚ್ 1 ರ ಹೊತ್ತಿಗೆ ಯೋಜನೆಯ ಫಲಾನುಭವಿಗಳು 9.59 ಕೋಟಿ ಎಂದು ಮಾಹಿತಿ ನೀಡಿದ್ದಾರೆ.
ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಈಗಾಗಲೇ ಈ ಸಬ್ಸಿಡಿಯನ್ನು ಮೇ 22, 2022 ರಿಂದ ಒದಗಿಸುತ್ತಿದೆ ಎಂದಿದ್ದಾರೆ.
ವಿವಿಧ ಭೌಗೋಳಿಕ ರಾಜಕೀಯ ಕಾರಣಗಳಿಂದಾಗಿ ಎಲ್ಪಿಜಿಯ ಅಂತರರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದೆ ಎಂದು ಠಾಕೂರ್ ಹೇಳಿದ್ದಾರೆ. ಹೆಚ್ಚಿನ ಎಲ್ಪಿಜಿ ಬೆಲೆಗಳಿಂದ ಉಜ್ವಲ ಫಲಾನುಭವಿಗಳನ್ನು ರಕ್ಷಿಸುವುದು ಮುಖ್ಯವಾಗಿದೆ. ಪಿಎಂಯುವೈ ಗ್ರಾಹಕರಿಗೆ ಉದ್ದೇಶಿತ ಬೆಂಬಲವು ಎಲ್ಪಿಜಿ ಬಳಕೆಯನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.