ಕೋಲ್ಕತ್ತಾ: ಈಗಾಗಲೇ ಬಹಿರಂಗಪಡಿಸಲಾಗಿರುವ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ರಹಸ್ಯ ದಾಖಲೆಗಳು ಕೆಲವೊಂದು ಮಹತ್ವದ ಮಾಹಿತಿಗಳನ್ನು ತೆರೆದಿಟ್ಟಿದೆ.
ನೇತಾಜೀ ಅವರು ಬದುಕಿದ್ದರು ಮತ್ತು 1948 ರಲ್ಲಿ ಚೀನಾದ ಮಂಚೂರಿಯಾದಲ್ಲಿ ಅವರು ನೆಲೆಸಿದ್ದರು ಎಂದು ಆಗ ಅವರ ಆಪ್ತ ದೆಬ್ ನಾಥ್ ದಾಸ್ ಅವರು ಹೇಳಿರುವ ಬಗೆಗಿನ ಮಾಹಿತಿ ಬಹಿರಂಗಗೊಂಡಿರುವ ದಾಖಲೆಗಳಲ್ಲಿ ಇದೆ.
ಫೈಲ್ ನಂ.೨೨ರಲ್ಲಿ, ಪಶ್ಚಿಮಬಂಗಾಳ ಸರ್ಕಾರ ಐಎನ್ಎ ನಾಯಕರುಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲಿದೆ.
ಆಗಸ್ಟ್ 9, 1948ರಲ್ಲಿ ದೆಬ್ ನಾಥ್ ದಾಸ್ ಅವರು ಕಾಂಗ್ರೆಸ್ ವಿರೋಧಿ ಪ್ರಚಾರ ಮಾಡುತ್ತಿದ್ದ ವೇಳೆ, ನೇತಾಜೀ ಬದುಕಿದ್ದಾರೆ, ಚೀನಾದ ಮಂಚೂರಿಯಾದ ಎಲ್ಲೋ ಒಂದು ಕಡೆ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು ಎಂಬುದಾಗಿ ದಾಖಲೆಗಳು ತಿಳಿಸಿವೆ.
ಅಲ್ಲದೇ ವಿಮಾನ ಅಪಘಾತಕ್ಕೂ ಮುನ್ ತೇಜಾಜೀ ಅವರು ದೆಬ್ ಅವರ ಬಳಿ, ಎರಡನೇ ಮಹಾಯುದ್ಧದ ಪ್ರಭಾವದಿಂದಾಗಿ ಮೂರನೇ ಮಹಾಯುದ್ಧವೂ ಸಂಭವಿಸುವ ಸಾಧ್ಯತೆ ಇದೆ ಎಂದಿದ್ದರು ಎನ್ನಲಾಗಿದೆ.
1945ರ ಆಗಸ್ಟ್ 22 ರಂದು ಟೋಕಿಯೋ ರೇಡಿಯೋವು, ಆಗಸ್ಟ್ 18ರಂದು ನಡೆದ ವಿಮಾನ ಅಪಘಾತದಲ್ಲಿ ಸುಭಾಷ್ ಚಂದ್ರ ಬೋಸ್ ಮೃತರಾಗಿದ್ದಾರೆ ಎಂದು ಘೋಷಿಸಿತ್ತು. ದರೆ ಬೋಸ್ ಅವರ ಆಪ್ತರು, ಬೆಂಬಲಿಗರು ಈ ವರದಿಯನ್ನು ನಿರಾಕರಿಸಿದ್ದರು. ಹೀಗಾಗಿ ಈಗಲೂ ಅವರ ಸಾವಿನ ರಹಸ್ಯ ರಹಸ್ಯವಾಗಿಯೇ ಉಳಿದಿದೆ. ಬಳಿಕ ಅಸ್ತಿತ್ವಕ್ಕೆ ಬಂದ ಯಾವ ಸರ್ಕಾರಗಳೂ ಅವರ ಸಾವಿನ ರಹಸ್ಯವನ್ನು ಬೇಧಿಸುವ ಗೋಜಿಗೇ ಹೋಗಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.