ನವದೆಹಲಿ: ರಾಷ್ಟ್ರದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ಅರೆಸೈನಿಕ ಸಂಘಟನೆಯಾದ ಅಸ್ಸಾಂ ರೈಫಲ್ಸ್ ಇಂದು ತನ್ನ 188 ನೇ ರೈಸಿಂಗ್ ಡೇ ಅನ್ನು ಆಚರಿಸಿದೆ. ಈ ಹಿನ್ನೆಲೆಯಲ್ಲಿ ಮೇಘಾಲಯದ ಶಿಲ್ಲಾಂಗ್ನ ಲೈಟ್ಕೋರ್ ಗ್ಯಾರಿಸನ್ನಲ್ಲಿ ಪ್ರಮುಖ ಕಾರ್ಯಕ್ರಮವನ್ನು ನಡೆಸಲಾಯಿತು.
ಈಶಾನ್ಯ ಪ್ರದೇಶದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವರಾದ ಜಿ.ಕಿಶನ್ ರೆಡ್ಡಿ ಅವರು ಈ ವರ್ಷದ ಸಂಭ್ರಮಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಚಿವರು ಅಸ್ಸಾಂ ರೈಫಲ್ಸ್ನ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಪಿಸಿ ನಾಯರ್ ಮತ್ತು ಪಡೆಯ ಎಲ್ಲಾ ಶ್ರೇಣಿಯ ಯೋಧರೊಂದಿಗೆ ಪಡೆಗಳ ಹುತಾತ್ಮ ವೀರರಿಗೆ ಗೌರವ ಸಲ್ಲಿಸಿದರು. ಈ ಪಡೆ ಕಳೆದ 188 ವರ್ಷಗಳಲ್ಲಿ ಸೇವೆಯ ಸಾಲಿನಲ್ಲಿ ಅತ್ಯುನ್ನತ ತ್ಯಾಗ ಮಾಡಿದೆ. ಮೇಘಾಲಯದ ಶಿಲ್ಲಾಂಗ್ನಲ್ಲಿರುವ ಯುದ್ಧ ಸ್ಮಾರಕದಲ್ಲಿ ವೀರಯೋಧರನ್ನು ಸನ್ಮಾನಿಸಲಾಯಿತು. ಭಾರತೀಯ ಸೇನೆ ಟ್ವಿಟರ್ ಮೂಲಕ ಅಸ್ಸಾಂ ರೈಫಲ್ಸ್ ಗೆ ಶುಭ ಕೋರಿದೆ.
ಇದು ಗಡಿ ರಕ್ಷಣೆ, ಬಂಡಾಯ ನಿಗ್ರಹ ಮತ್ತು ಈಶಾನ್ಯ ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುವ ಪ್ರಮುಖ ಅರೆಸೈನಿಕ ಸಂಘಟನೆಯಾಗಿದೆ. ಇಂಡೋ-ಮ್ಯಾನ್ಮಾರ್ ಗಡಿಯನ್ನು ರಕ್ಷಿಸುತ್ತದೆ.
General Manoj Pande #COAS and All Ranks of the #IndianArmy convey best wishes to All Ranks and Families of #AssamRifles on the occasion of 188th Raising Day. #thesentinelsofthenortheast@official_dgar pic.twitter.com/XJXPQY25X5
— ADG PI – INDIAN ARMY (@adgpi) March 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.