News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಂಡನ್‌ ದೂತವಾಸದಲ್ಲಿ ತಿರಂಗಾ ಎಸೆದಿದ್ದ ಖಲಿಸ್ತಾನಿ ನಾಯಕ ಅವತಾರ್ ಸಿಂಗ್ ಖಂಡಾ ಬಂಧನ

ಲಂಡನ್: ಮಾರ್ಚ್ 19 ರಂದು ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ರಾಷ್ಟ್ರ ಧ್ವಜವನ್ನು ಕೆಳಕ್ಕೆ ಇಳಿಸಿ ಅವಮಾನ ಮಾಡಿದ್ದ ಖಲಿಸ್ತಾನಿ ಅವತಾರ್ ಸಿಂಗ್ ಖಂಡಾ ಎಂಬಾತನನ್ನು ಬಂಧಿಸಲಾಗಿದೆ.

ಖಂಡಾನ ತಂದೆ ಕುಲ್ವಂತ್ ಸಿಂಗ್ ಖುಕ್ರಾನಾ ʼಖಲಿಸ್ತಾನ್ ಲಿಬರೇಶನ್ ಫೋರ್ಸ್ (KLF)ʼ ನ ಮಾಜಿ ಸದಸ್ಯನಾಗಿದ್ದ ಎಂದು ಮೂಲಗಳು ತಿಳಿಸಿವೆ. ಕೆಎಲ್ಎಫ್ 1986 ರಲ್ಲಿ ಸಶಸ್ತ್ರ ಹೋರಾಟದ ಮೂಲಕ ಪಂಜಾಬ್ ಅನ್ನು ಭಾರತದಿಂದ ಬೇರ್ಪಡಿಸುವ ಮೂಲಕ ಖಲಿಸ್ತಾನ್ ಅನ್ನು ಸ್ಥಾಪಿಸುವ ಉದ್ದೇಶದಿಂದ ರಚಿಸಲ್ಪಟ್ಟ ಸಂಘಟನೆಯಾಗಿದೆ.

ಇತ್ತೀಚೆಗೆ ಹರಿದಾಡಿದ್ದ ವೀಡಿಯೊವೊಂದರಲ್ಲಿ, ಖಾಲಿಸ್ತಾನ್ ಬೆಂಬಲಿಗರ ಗುಂಪೊಂದು ಭಾರತೀಯ ಹೈಕಮಿಷನ್‌ನ ಹೊರಗೆ “ಖಲಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿ ತಿರಂಗಾವನ್ನು ಕೆಳಕ್ಕೆ ಇಳಿಸುತ್ತಿರುವುದನ್ನು ಕಾಣಬಹುದು.  ಜನರ ನಡುವೆ ಕಟ್ಟಡದ ಮೇಲೆ ಹತ್ತಿ ತಿರಂಗಾ ಕೆಳಕ್ಕೆ ಎಸೆದ ಕಿತ್ತಳೆ ಬಣ್ಣದ ಪೇಟವನ್ನು ಧರಿಸಿದ್ದ ವ್ಯಕ್ತಿ ಅವತಾರ್ ಸಿಂಗ್ ಖಾಂಡಾ ಎಂದು ಗುರುತಿಸಲಾಗಿದೆ.

ಅವತಾರ್ ಸಿಂಗ್ ಖಂಡಾ ವಿದೇಶಿ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಯಾಗಿದ್ದು, ಈ ಹಿಂದೆ ಯುಕೆ ಗುರುದ್ವಾರಗಳಲ್ಲಿ ಸ್ಫೋಟಕಗಳ ಬಳಕೆಯ ಬಗ್ಗೆ ತರಬೇತಿಯನ್ನು ನೀಡುತ್ತಿದ್ದ ಎಂದು ಭಾರತೀಯ ಅಧಿಕಾರಿಗಳು ಆರೋಪಿಸಿದ್ದಾರೆ. ಅವನು ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ ನಾಯಕ ಪರಮ್‌ಜಿತ್ ಸಿಂಗ್ ಪಮ್ಮಾನ ವಿಶ್ವಾಸಾರ್ಹ ಸಹವರ್ತಿ ಎನ್ನಲಾಗಿದೆ.

ಗಡಿ ರಾಜ್ಯವಾದ ಪಂಜಾಬ್‌ನಲ್ಲಿ ಉಗ್ರವಾದವನ್ನು ಪುನರುಜ್ಜೀವನಗೊಳಿಸುವ ವಿದೇಶಿ ಶಕ್ತಿಗಳ ಪಿತೂರಿಯ ಭಾಗವಾಗಿ ಖಂಡಾ ನಿಕಟವರ್ತಿ ಅಮೃತಪಾಲ್ ಸಿಂಗ್ ಗುರುತಿಸಲ್ಪಟ್ಟಿದ್ದಾನೆ. ಮೂಲಭೂತವಾದದ ದೃಷ್ಟಿಕೋನಗಳೊಂದಿಗೆ ಯುವ ಸಿಖ್ಖರ ಮೇಲೆ ಪ್ರಭಾವ ಬೀರುವ ಮೂಲಕ ಪಂಜಾಬ್ ಅನ್ನು ಅಸ್ಥಿರಗೊಳಿಸುವ ಯೋಜನೆಯಾದ “ಮಿಷನ್ ಖಲಿಸ್ತಾನ್” ಗಾಗಿ ಸಿಂಗ್ ಖಂಡಾನಿಂದ ತರಬೇತಿ ಪಡೆದಿದ್ದಾನೆ ಎನ್ನಲಾಗಿದೆ.

 ಖಲಿಸ್ತಾನ್ ಬೆಂಬಲಿಗರು ಭಾರತದ ವಿರುದ್ಧ ತಮ್ಮ ಮೂಲಭೂತ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಅಮೇರಿಕನ್, ಕೆನಡಿಯನ್ ಮತ್ತು ಬ್ರಿಟಿಷ್ ನೆಲವನ್ನು ಸಕ್ರಿಯವಾಗಿ ಬಳಸುತ್ತಾರೆ ಮತ್ತು ಖಲಿಸ್ತಾನ್-ಸಂಬಂಧಿತ ಗುಂಪುಗಳಿಗೆ ಹಣವನ್ನು ಸಂಗ್ರಹಿಸುತ್ತಾರೆ, ಆಗಾಗ ಹಣವನ್ನು ವರ್ಗಾವಣೆ ಮಾಡಲು ಅನೌಪಚಾರಿಕ ಹವಾಲಾ ಜಾಲಗಳನ್ನು ಬಳಸುತ್ತಾರೆ ಎಂಬುದು ವರದಿಗಳಿಂದ ಸ್ಪಷ್ಟವಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top