News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಂಡನ್‌: ತಿರಂಗಾ ಮೂಲಕವೇ ಖಲಿಸ್ತಾನಿಗಳಿಗೆ ಭಾರತದ ದಿಟ್ಟ ಉತ್ತರ

ನವದೆಹಲಿ: ಪಂಜಾಬಿನಲ್ಲಿ ನಡೆಯುತ್ತಿರುವ ಖಲಿಸ್ತಾನ್‌ ಪರ ನಾಯಕ ಅಮೃತಪಾಲ್ ಸಿಂಗ್ ವಿರುದ್ಧದ ಕಾರ್ಯಾಚರಣೆಯನ್ನು ಖಂಡಿಸಿ ಖಲಿಸ್ತಾನಿ ಬೆಂಬಲಿಗರು ಯುಕೆಯ ಭಾರತದ ಹೈಕಮಿಷನರ್‌ ಕಛೇರಿ ಕಟ್ಟಡದ ಹೊರಗೆ ಹಾರಾಡುತ್ತಿದ್ದ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ದುಷೃತ್ಯ ಮೆರೆದಿದ್ದರು.

ಇದರ ಬೆನ್ನಲ್ಲೇ ಇದೀಗ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡವನ್ನು ಬೃಹತ್ ತ್ರಿವರ್ಣ ಧ್ವಜವು ಅಲಂಕರಿಸಿದೆ.

ಲಂಡನ್‌ನ ಆಲ್ಡ್‌ವಿಚ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಬೃಹತ್ ರಾಷ್ಟ್ರಧ್ವಜದ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಶ್ಲಾಘಿಸಿದ್ದಾರೆ.

ಟ್ವಿಟರ್ ಪೋಸ್ಟ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್, “ಝಂಡಾ ಊಂಚಾ ರಹೇ ಹಮಾರಾ” – ಲಂಡನ್, ಹೈಕಮಿಷನ್‌ನಲ್ಲಿ ಭಾರತೀಯ ಧ್ವಜವನ್ನು ಅಗೌರವಿಸಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಯುಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಪಂಜಾಬ್ ಮತ್ತು ಪಂಜಾಬಿಗಳು ರಾಷ್ಟ್ರದ ಸೇವೆ/ಸಂರಕ್ಷಣೆಯಲ್ಲಿ ಅದ್ಭುತವಾದ ದಾಖಲೆಯನ್ನು ಹೊಂದಿದ್ದಾರೆ. ಬೆರಳಣಿಕೆಯಷ್ಟು ಜಂಪಿಂಗ್‌ ಜ್ಯಾಕ್‌ಗಳು ಪಂಜಾಬ್‌ ಅನ್ನು ಪ್ರತಿನಿಧಿಸಲಾರರು” ಎಂದಿದ್ದಾರೆ.

ಖಲಿಸ್ತಾನಿ ಬೆಂಬಲಿಗರೊಬ್ಬರು ರಾಷ್ಟ್ರಧ್ವಜವನ್ನು ಕೆಳಗಿಳಿಸುತ್ತಿರುವ ದೃಶ್ಯಗಳು ರಾಷ್ಟ್ರವನ್ನು ಕೆರಳಿಸಿತ್ತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಆದರೆ ಇಂದು ಖಲಿಸ್ತಾನ್ ಧ್ವಜವನ್ನು ಎಸೆಯುತ್ತಿರುವ ಹೈಕಮಿಷನ್ ಅಧಿಕಾರಿಯ ದಿಟ್ಟ ಕ್ರಮವನ್ನು ಹಲವರು ಶ್ಲಾಘಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top