ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು 2047 ರ ವೇಳೆಗೆ ಭಾರತವು ಪ್ರಸ್ತುತ ಅಮೆರಿಕಾ ಇರುವ ಮಟ್ಟದಲ್ಲಿರಬಹುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಅವರು ಇತ್ತೀಚಿಗೆ ಪುಣೆಯಲ್ಲಿ ನಡೆದ ಏಷ್ಯಾ ಆರ್ಥಿಕ ಸಂವಾದ 2023 ಕಾರ್ಯಕ್ರಮದಲ್ಲಿ ಈ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
”ಮುಂದಿನ ನಾಲ್ಕೈದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2047 ರ ಹೊತ್ತಿಗೆ, ನಾವು ಇಂದು ಅಮೆರಿಕಾ ಇರುವ ಮಟ್ಟದಲ್ಲಿರುತ್ತೇವೆ. ಭಾರತದ 1.4 ಶತಕೋಟಿ ಜನರು ನಮ್ಮ ಆರ್ಥಿಕತೆಯನ್ನು USD 30-40 ಟ್ರಿಲಿಯನ್ ಆಗಿ ಮಾಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ವ್ಯಾಪಾರ ಒಪ್ಪಂದ (RCEP)ಕ್ಕೆ ಭಾರತ ಸೇರ್ಪಡೆಯಾಗದಿರುವ ಕುರಿತು ಗೋಯಲ್ ಮಾತನಾಡಿ, ”ಮೇಲ್ಮನವಿ ನ್ಯಾಯಾಲಯವಿಲ್ಲದೆ, ಯಾವುದೇ ಪ್ರಜಾಪ್ರಭುತ್ವ ಅಥವಾ ಕಾನೂನಿನ ನಿಯಮಗಳಿಲ್ಲದೆ ಮುಕ್ತ ವ್ಯಾಪಾರ ಒಪ್ಪಂದವನ್ನು ಪ್ರವೇಶಿಸುವುದು ದುರಂತವಾಗುತ್ತದೆ” ಎಂದಿದ್ದಾರೆ.
ಭಾರತವು ಆರ್ಸಿಇಪಿ ಕಾರ್ಯವಿಧಾನದಲ್ಲಿ ಹೊರಗಿದೆ, ಅದರಲ್ಲಿರುವ 15 ರಾಷ್ಟ್ರಗಳಲ್ಲಿ, ಭಾರತವು 10 ಆಸಿಯಾನ್ ರಾಷ್ಟ್ರಗಳು ಮತ್ತು ಜಪಾನ್ ಮತ್ತು ಕೊರಿಯಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿತ್ತು ಮತ್ತು ಚೀನಾದೊಂದಿಗೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೊಂದಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್, 2019 ರಲ್ಲಿ, RCEP ವ್ಯಾಪಾರ ಒಪ್ಪಂದಕ್ಕೆ ಭಾರತ ಸೇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಥಾಯ್ಲೆಂಡ್ನಲ್ಲಿ ನಡೆದ ಆರ್ಸಿಇಪಿ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಬಾಕಿ ಉಳಿದಿರುವ ಸಮಸ್ಯೆಗಳು ಮತ್ತು ಕಳವಳಗಳನ್ನು ಪರಿಹರಿಸಲು ಮಾತುಕತೆಗಳು ವಿಫಲವಾಗಿವೆ ಎಂದು ಹೇಳಿದ್ದರು.
RCEP 10 ಅಸಿಯಾನ್ ರಾಷ್ಟ್ರಗಳು ಮತ್ತು ಅದರ ಆರು ಮುಕ್ತ ವ್ಯಾಪಾರ ಒಪ್ಪಂದ ಪಾಲುದಾರರನ್ನು ಒಳಗೊಂಡಿರುತ್ತದೆ, ಅವುಗಳೆಂದರೆ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್. ಅಗ್ಗದ ಚೀನೀ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳ ಭೀತಿಯೊಂದಿಗೆ ಭಾರತವು ಇದರಿಂದ ಹೊರಗುಳಿದಿದೆ.
ಚೀನಾದೊಂದಿಗಿನ ವ್ಯಾಪಾರದ ಕುರಿತು ಮಾತನಾಡಿದ ಗೋಯಲ್, ಪ್ರಸ್ತುತ ರೂಪಿಸಲಾದ ಕಾರ್ಯವಿಧಾನವು ಭಾರತದಲ್ಲಿ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಹೇಳಿದರು.
”ನನ್ನ ಸ್ವಂತ ಅನುಭವವೆಂದರೆ ಚೀನಾ ಭಾರತದಿಂದ ಆಮದು ಮಾಡಿಕೊಳ್ಳಲು ನಿರ್ಬಂಧ ವಿಧಿಸುತ್ತದೆ, ಆದರೆ ನಾವು ಅವರ ಉತ್ಪನ್ನವನ್ನು ಮುಕ್ತವಾಗಿ ಒಪ್ಪಿಕೊಂಡರೆ ದುರ್ಬಲರಾಗಿ ಬಿಡುತ್ತೇಚೆ . ಇದು ಎಲ್ಲೋ ಅಫೀಮು ಇದ್ದಂತೆ” ಎಂದರು.
”2004-2014ರ ನಡುವೆ, ಚೀನಾದೊಂದಿಗಿನ ವ್ಯಾಪಾರ ಕೊರತೆಯು USD 500 ದಶಲಕ್ಷದಿಂದ USD 48 ಶತಕೋಟಿಗೆ ಏರಿತು. ಅವರು ಭಾರತದಿಂದ ಉತ್ಪನ್ನಗಳನ್ನು ನಿಲ್ಲಿಸಿದರೂ ನಾವು ಎಲ್ಲವನ್ನೂ ಚೀನಾದಿಂದ ಬರಲು ಅನುಮತಿಸಿದ್ದೇವೆ. ಅದಕ್ಕಾಗಿಯೇ, ಆರ್ಸಿಇಪಿ ವ್ಯಾಪಾರ ಒಪ್ಪಂದಕ್ಕೆ ನಾವು ಸೇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ” ಎಂದು ಅವರು ಪ್ರತಿಪಾದಿಸಿದರು.
ಸಮಾಜದ ಪ್ರತಿಯೊಂದು ವಿಭಾಗ, ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಗಳು, ಆರ್ಇಸಿಪಿ ಕುರಿತು ಪ್ರಧಾನ ಮಂತ್ರಿಯವರ ನಿರ್ಧಾರವನ್ನು ಸ್ವಾಗತಿಸುತ್ತವೆ ಎಂದು ಗೋಯಲ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.