ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ರಾಮಚರಿತಮಾನಸಕ್ಕೆ ಅಪಮಾನ ಮಾಡಿದ ಸಮಾಜವಾದಿ ಪಕ್ಷದ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ರೀತಿಯ ಅಪಮಾನ ಬೇರೆ ಧರ್ಮಗಳಲ್ಲಿ ನಡೆದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಲಕ್ನೋದಲ್ಲಿ ಮುಕ್ತಾಯಗೊಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷವು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹಿಂದೂ ಸಮುದಾಯವನ್ನು ಅವಮಾನಿಸಲು ಪ್ರಯತ್ನಿಸಿತು ಎಂದು ಯೋಗಿ ಆರೋಪಿಸಿದ್ದಾರೆ.
“ಜಾಗತಿಕ ಹೂಡಿಕೆದಾರರ ಶೃಂಗಸಭೆ ಪ್ರಾರಂಭವಾಗುವ ಕ್ಷಣದಲ್ಲಿ, ಸಮಾಜವಾದಿ ಪಕ್ಷವು ತುಳಸಿ ದಾಸ್ ಅವರ ಬಗ್ಗೆ ರಾಮಚರಿತಮಾನಸದ ಗದ್ದಲವನ್ನು ಪ್ರಾರಂಭಿಸಿತು. ಕೆಲವರು ರಾಮಚರಿತಮಾನಸವನ್ನು ಹರಿದು ಹಾಕಲು ಪ್ರಯತ್ನಿಸಿದರು. ಇದೇ ರೀತಿ ಬೇರೆ ಯಾವುದಾದರೂ ಧರ್ಮಕ್ಕೆ ಸಂಬಂಧಿಸಿದಂತೆ ಸಂಭವಿಸಿದ್ದರೆ ಏನಾಗುತ್ತಿತ್ತು? ಇದರರ್ಥ ಯಾರು ಬೇಕಾದರೂ ಹಿಂದೂಗಳನ್ನು ಅವಮಾನಿಸಬಹುದೆಂದೇ? ನೀವು ಇಡೀ ಹಿಂದೂ ಸಮುದಾಯವನ್ನು ಅವಮಾನಿಸಲು ಬಯಸುತ್ತಿದ್ದೀರಿ” ಎಂದಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಮಹಾಕಾವ್ಯವನ್ನು ಆಧರಿಸಿದ ಕವಿತೆಯಾದ ರಾಮಚರಿತಮಾನಸದ ಬಗ್ಗೆ ಅವಮಾನಕಾರಿಯಾದ ಟೀಕೆಗಳನ್ನು ಮಾಡಿದ್ದರು ಮತ್ತು ಅದನ್ನು ಹರಿದು ಹಾಕಲು ಕರೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.