ವಾರಣಾಸಿ: ಹಲವಾರು ವರ್ಷಗಳಿಂದ ‘ಗರೀಬಿ ಹಠಾವೋ’ ಎಂಬ ಘೋಷಣೆಯನ್ನು ಕೇಳುತ್ತಾ ಬಂದಿದ್ದೇವೆ, ಆದರೆ ನಾವು ನಿರೀಕ್ಷಿಸಿದಷ್ಟು ಬಡತನ ನಮ್ಮ ದೇಶದಿಂದ ನಿರ್ಮೂಲನೆಯಾಗಿಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ಕೊಟ್ಟ ಅವರು, ಅಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಬಡತನ ನಿರ್ಮೂಲನೆ ಮಾಡುವ ಕಾರ್ಯದ ವೇಗವನ್ನು ಹೆಚ್ಚಿಸಬೇಕಾಗಿದೆ, ಬಡವರನ್ನು ಸಶಕ್ತರನ್ನಾಗಿಸುವುದೇ ನನ್ನ ಸರ್ಕಾರದ ಮೊದಲ ಗುರಿ. ಬಡವರ ಬದುಕಲ್ಲಿ ಬದಲಾವಣೆ ತರಲು ವಿಫಲವಾದುದಕ್ಕೆ ನಾನು ಹಿಂದಿನ ಸರ್ಕಾರವನ್ನು ದೂಷಿಸುವುದಿಲ್ಲ ಎಂದರು.
ಕಳೆದ 40ವರ್ಷದಿಂದ ದೇಶದಲ್ಲಿ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ, ಕಳೆದ ಐವತ್ತು ವರ್ಷದಿಂದ ಒಂದು ಬ್ಯಾಂಕ್ ಖಾತೆಯನ್ನೂ ತೆರೆಯಲು ಆಗದವರು ನಮ್ಮ ಜನಧನ ಯೋಜನೆಯನ್ನು ದೂಷಿಸುತ್ತಿದ್ದಾರೆ. ಕಾಂಗ್ರೆಸ್ನಿಂದ ೫೦ ವರ್ಷದಲ್ಲಿ ಮಾಡಲು ಆಗದ ಕಾರ್ಯವನ್ನು ಬಿಜೆಪಿ ೫೦ ತಿಂಗಳಲ್ಲಿ ಮಾಡಿ ತೋರಿಸಲಿದೆ ಎಂದರು.
ಇ-ರಿಕ್ಷಾಗಳು ವಾರಣಾಸಿಯ ಭವಿಷ್ಯವನ್ನು ಬದಲಿಸಲಿದೆ, ಪ್ರವಾಸಿಗರು ಆಗಮಿಸಿದಾಗ ಮೊದಲು ರಿಕ್ಷಾ ಚಾಲಕರೊಂದಿಗೆ ಸಂವಾದ ನಡೆಸುತ್ತಾರೆ
ತಮ್ಮ ಮಕ್ಕಳು ತಮಗಿಂತ ಉತ್ತಮರಾಗಬೇಕು ಎಂದೇ ಎಲ್ಲಾ ಪೋಷಕರು ಆಶಿಸುತ್ತಾರೆ. ಬಡತನದ ವಿರುದ್ಧ ಹೋರಾಡಲು ಒಬ್ಬರಿಗೆ ಇರುವ ಅತಿದೊಡ್ಡ ಅಸ್ತ್ರವೆಂದರೆ ಅದು ಶಿಕ್ಷಣ ಮಾತ್ರ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ನಾನು ಮನವಿ ಮಾಡುತ್ತೇನೆ ಎಂದರು.
8 ತಿಂಗಳ ಬಳಿಕ ವಾರಣಾಸಿಗೆ ಆಗಮಿಸಿದ ಮೋದಿ ೬೦೦ಕ್ಕೂ ಹೆಚ್ಚು ಜನರಿಗೆ ’ಜನಧನ ಯೋಜನೆ’ಯಡಿ ಇ-ರಿಕ್ಷಾಗಳನ್ನು ವಿತರಿಸಿದರು. ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.