ಪುಣೆ: ತನ್ನ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧನಿರುವ ದೇಶವಾಗಿ ಇಂದು ಭಾರತದ ಚಿತ್ರಣವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಪುಣೆಯಲ್ಲಿ ಸಿಂಬಯಾಸಿಸ್ ಇಂಟರ್ನ್ಯಾಶನಲ್ ಯೂನಿವರ್ಸಿಟಿ ಆಯೋಜಿಸಿದ್ದ ‘ಫೆಸ್ಟಿವಲ್ ಆಫ್ ಥಿಂಕರ್ಸ್’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸವಾಲುಗಳಿವೆ ಮತ್ತು ಯಾವುದೇ ಸವಾಲು ರಾಷ್ಟ್ರೀಯ ಭದ್ರತೆಯಷ್ಟು ತೀಕ್ಷ್ಣವಾಗಿಲ್ಲ ಎಂದ ಅವರು, ಭಾರತವು ಇತರ ದೇಶಗಳನ್ನು ಅತಿಕ್ರಮಿಸದ ಮತ್ತು ಇತರನನ್ನು ತನ್ನ ಭೂಪ್ರದೇಶಕ್ಕೆ ಕಾಲಿಡಲು ಬಿಡದ ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
“ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಪಶ್ಚಿಮ ಗಡಿಯಲ್ಲಿ ನಮ್ಮನ್ನು ದೀರ್ಘಕಾಲದವರೆಗೆ ಪರೀಕ್ಷಿಸಲಾಗಿದೆ. ಈಗ ವಿಷಯಗಳು ಸ್ವಲ್ಪ ವಿಭಿನ್ನವಾಗಿವೆ. ನಮ್ಮ ಉತ್ತರದ ಗಡಿಗಳಲ್ಲೂ ನಮ್ಮನ್ನು ಪರೀಕ್ಷೆಗೊಡ್ಡಲಾಗುತ್ತಿದೆ. ಈ ಪರೀಕ್ಷೆಯ ಮೂಲಕ ಭಾರತ ಹೇಗೆ ಹೊರಹೊಮ್ಮುತ್ತದೆ ಎಂಬುದು ನಮ್ಮ ಎದ್ದುಕಾಣುವ ಸಾಮರ್ಥ್ಯವನ್ನು ತೋರಿಸುತ್ತದೆ” ಎಂದು ಜೈಶಂಕರ್ ಹೇಳಿದ್ದಾರೆ
“ತನ್ನ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧವಿರುವ ದೇಶದ ಚಿತ್ರಣವನ್ನು ನಾವು ಇಂದು ಹೊಂದಿದ್ದೇವೆ. ಭಾರತ ಅತ್ಯಂತ ಸಹನಶೀಲ ದೇಶ, ತಾಳ್ಮೆಯ ದೇಶ, ಇದು ಇತರ ಜನರೊಂದಿಗೆ ಜಗಳವಾಡುವ ದೇಶವಲ್ಲ, ಆದರೆ ಅದು ತನ್ನ ಮೂಲ ತಳಹದಿಯ ಗೆರೆಯನ್ನು ಯಾರಿಗೂ ದಾಟಲು ಬಿಡದ ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.