ನವದೆಹಲಿ: ಎಂಟು ರಾಜ್ಯಗಳ 76 ಸ್ಥಳಗಳ ಮೇಲೆ ಇತ್ತೀಚಿಗೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎಎನ್ಐ) ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಜಗ್ಗು ಭಗವಾನ್ಪುರಿ ಮತ್ತು ಗೋಲ್ಡಿ ಬ್ರಾರ್ ಅವರ ನಿಕಟ ಸಹಚರರು ಸೇರಿದಂತೆ ಖಲಿಸ್ಥಾನಿ ಸಂಬಂಧಿತ ಆರು ಜನರನ್ನು ಬಂಧಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ಬಂಧಿತರಲ್ಲಿ ಕೆನಡಾ ಮೂಲದ ಭಯೋತ್ಪಾದಕ ಅರ್ಶ್ ದಲ್ಲಾನ ನಿಕಟ ಸಹಚರ ಲಕ್ಕಿ ಖೋಕರ್ ಅಲಿಯಾಸ್ ಡೆನಿಸ್ ಕೂಡ ಸೇರಿದ್ದಾನೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಯುಪಿ, ದೆಹಲಿ, ಎನ್ಸಿಆರ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ನಡೆಸಲಾದ ದಾಳಿಯಲ್ಲಿ ಬಂಧಿತರಾದವರಲ್ಲಿ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಜಗ್ಗು ಭಗವಾನ್ಪುರಿಯಾ ಮತ್ತು ಗೋಲ್ಡಿ ಬ್ರಾರ್ ಸಹಚರರು ಸೇರಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಭಟಿಂಡಾ ನಿವಾಸಿ ಖೋಖರ್ ಅನ್ನು ಮಂಗಳವಾರ ರಾಜಸ್ಥಾನದ ಶ್ರೀ ಗಂಗಾನಗರದಿಂದ ಬಂಧಿಸಲಾಗಿದೆ. ಆತ ಕೆನಡಾದಲ್ಲಿ ಅರ್ಶ್ ದಲಾ ಜೊತೆ ನೇರ ಸಂಪರ್ಕದಲ್ಲಿದ್ದ ಮತ್ತು ಅವನಿಗೆ ನೇಮಕಾತಿಯನ್ನು ನೋಡಿಕೊಳ್ಳುತ್ತಿದ್ದ ಮತ್ತು ಭಯೋತ್ಪಾದನೆ-ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಅವನಿಂದ ಹಣವನ್ನು ಪಡೆಯುತ್ತಿದ್ದ. ಅವನು ಆತನ ನಿರ್ದೇಶನದ ಮೇರೆಗೆ ಪಂಜಾಬ್ನಲ್ಲಿ ಅರ್ಶ್ ದಲ್ಲಾ ಸಹಚರರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒದಗಿಸುತ್ತಿದ್ದ, ಆರ್ಶ್ ದಲ್ಲಾ ನಿರ್ದೇಶನದ ಮೇರೆಗೆ ಪಂಜಾಬ್ನ ಜಾಗರಾನ್ನಲ್ಲಿ ಇತ್ತೀಚೆಗೆ ಹತ್ಯೆಯನ್ನು ಸಹ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಪ್ರಮುಖ ದರೋಡೆಕೋರರಾಗಿದ್ದ ಕೆಲವು ಈ ಗುಂಪಿನ ಸದಸ್ಯರು ಪಾಕಿಸ್ತಾನ, ಕೆನಡಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಪಲಾಯನಗೈದಿದ್ದಾರೆ ಮತ್ತು ಜೈಲಿನಲ್ಲಿರುವ ಅಪರಾಧಿಗಳೊಂದಿಗೆ ಸೇರಿಕೊಂಡು ಅಲ್ಲಿಂದಲೇ ತಮ್ಮ ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳನ್ನು ಯೋಜಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಎನ್ಐಎ ತನಿಖೆಗಳು ಇಲ್ಲಿಯವರೆಗೆ ಬಹಿರಂಗಪಡಿಸಿವೆ. ವಿವಿಧ ರಾಜ್ಯಗಳಲ್ಲಿ ಈ ಗುಂಪುಗಳು ಉದ್ದೇಶಿತ ಹತ್ಯೆಗಳನ್ನು ನಡೆಸುತ್ತಿದ್ದವು ಮತ್ತು ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಹವಾಲಾ ಮತ್ತು ಸುಲಿಗೆಗಳ ಮೂಲಕ ತಮ್ಮ ದುಷ್ಕೃತ್ಯಗಳಿಗೆ ಹಣವನ್ನು ಸಂಗ್ರಹಿಸುತ್ತಿದ್ದವು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.