ಬೆಂಗಳೂರು: ಕೇಂದ್ರ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಬೆಂಗಳೂರಿನಲ್ಲಿ ಜಿ20 ರಾಷ್ಟ್ರಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಡೆಪ್ಯೂಟೀಸ್ (ಎಫ್ಸಿಬಿಡಿ) ಕುರಿತ ಜಿ20 ಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ಘಾಟಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಜಿ 20 ರ ಭಾರತೀಯ ಅಧ್ಯಕ್ಷ ಸ್ಥಾನವು ಜಾಗತಿಕ ದಕ್ಷಿಣದ ಕಳವಳಗಳನ್ನು ವ್ಯಕ್ತಪಡಿಸಲು ದೊರೆತ ಗೌರವವಾಗಿದೆ ಮತ್ತು ಭೇಟಿ ನೀಡುವ ಪ್ರತಿನಿಧಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಪರಿಣತಿಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಮತ್ತು ಅದರಿಂದ ಉಂಟಾದ ಆರ್ಥಿಕ ಹಿಂಜರಿತದಿಂದ ಹೊರಬರುವಲ್ಲಿ ಭಾರತ ಯಶಸ್ವಿಯಾಗಿದೆ ಎಂದ ಅವರು, ವಸುದೈವ ಕುಟುಂಬಕಂನ ಧ್ಯೇಯವನ್ನು ಅನುಸರಿಸಿ ದೇಶವು ಇಂದು ಪ್ರಪಂಚದ ಔಷಧಾಲಯವಾಗಿದೆ ಮತ್ತು 101 ದೇಶಗಳಿಗೆ ಮಿಲಿಯನ್ ಡೋಸ್ ಕೋವಿಡ್ ಲಸಿಕೆಯನ್ನು ಪೂರೈಸಿದೆ ಎಂದಿದ್ದಾರೆ.
ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿನ್ ಮತ್ತು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ಗಳು ಜಾಗತಿಕವಾಗಿ ಹೆಚ್ಚು ಮೆಚ್ಚುಗೆ ಪಡೆದಿವೆ. ಯುಪಿಐ ಭೀಮ್ ಅಪ್ಲಿಕೇಶನ್ ಬಳಕೆಯಲ್ಲಿ ದೇಶವು ಗಣನೀಯ ಪ್ರಗತಿಯನ್ನು ಸಾಧಿಸಿದೆ, ಕಳೆದ ತಿಂಗಳು 782 ಕೋಟಿ ವಹಿವಾಟುಗಳು ದಾಖಲಾಗಿವೆ. ಫಲಾನುಭವಿಗಳಿಗೆ ಹಣದ ನೇರ ಲಾಭ ವರ್ಗಾವಣೆಯು ಪಾರದರ್ಶಕತೆಯನ್ನು ತಂದಿದೆ, ಕೊನೆಯ ಮೈಲಿ ವಿತರಣೆಯನ್ನು ಖಚಿತಪಡಿಸಿದೆ ಮತ್ತು ಸಮಯವನ್ನು ಉಳಿಸಿದೆ ಎಂದರು.
ಭಾರತವು ಇಂಧನ ಪರಿವರ್ತನೆಯಲ್ಲಿ ತನ್ನ ಗುರಿಯನ್ನು ಸಾಧಿಸಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಐದು ಮಿಲಿಯನ್ ಮೆಟ್ರಿಕ್ ಟನ್ ಹೈಡ್ರೋಜನ್ ಹಸಿರು ಶಕ್ತಿಯನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ. ಇಂಧನ, ಸಾಲ ಮತ್ತು ತೆರಿಗೆ ಸಮಸ್ಯೆಗಳು ಮತ್ತು ಗಡಿಯಾಚೆಗಿನ ಹಣಕಾಸು ವಹಿವಾಟುಗಳಲ್ಲಿನ ಹಂಚಿಕೆಯ ಕಾಳಜಿಗಳಿಗೆ ಜಾಗತಿಕ ಪ್ರಾಯೋಗಿಕ ಪರಿಹಾರವನ್ನು ವಿಕಸಿಸಲು G20 ವೇದಿಕೆ ಸಹಾಯ ಮಾಡುತ್ತದೆ ಎಂದು ಸಚಿವರು ಆಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.