ನವದೆಹಲಿ: ಚಾರ್ ಧಾಮ್ ಯಾತ್ರೆಗಾಗಿ ಯಾತ್ರಾರ್ಥಿಗಳ ಆನ್ಲೈನ್ ನೋಂದಣಿ ಇಂದು ಪ್ರಾರಂಭವಾಗಿದೆ. ಬೆಳಗ್ಗೆ ಏಳು ಗಂಟೆಗೆ ಪ್ರವಾಸೋದ್ಯಮ ಇಲಾಖೆಯ ಪೋರ್ಟಲ್ ಅನ್ನು ನೋಂದಣಿಗಾಗಿ ತೆರೆಯಲಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಮುಂದಿನ ಔಪಚಾರಿಕ ಪ್ರಕಟಣೆಯ ದಿನಾಂಕದವರೆಗೆ ಯಾತ್ರಾರ್ಥಿಗಳು ಬದರಿನಾಥ್ ಮತ್ತು ಕೇದಾರನಾಥ ಧಾಮಕ್ಕೆ ನೋಂದಾಯಿಸಿಕೊಳ್ಳಲು ಸಾಧ್ಯವಾಗಲಿದೆ.
ಆನ್ಲೈನ್ ಮೂಲಕ ಪ್ರವಾಸಿಗರು ಮನಲೆಯಲ್ಲೇ ಕುಳಿತು ನೋಂದಣಿ ಮಾಡುವ ಸೌಲಭ್ಯ ಪಡೆದುಕೊಂಡಿದ್ದಾರೆ. ಅಲ್ಲದೇ ಅವರು ದೇವಾಲಯದ ತೆರೆಯುವ ಸಮಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೂಡ ಪಡೆಯಲಿದ್ದಾರೆ. ಉತ್ತರಾಖಂಡದಲ್ಲಿ ದೇವರುಗಳು ಮತ್ತು ಭಾರತದ ಪವಿತ್ರ ನದಿಗಳಿಗೆ ಸಮರ್ಪಿತವಾದ ನಾಲ್ಕು ಪವಿತ್ರ ದೇವಾಲಯಗಳಿವೆ. ನಾಲ್ಕು ದೇಗುಲಗಳು ಗರ್ವಾಲ್ ಪ್ರದೇಶದಲ್ಲಿ ನೆಲೆಗೊಂಡಿವೆ.
ಇವುಗಳನ್ನು ಒಟ್ಟಾರೆಯಾಗಿ “ಉತ್ತರಾಖಂಡದ ಚಾರ್ ಧಾಮ್” ಎಂದು ಕರೆಯಲಾಗುತ್ತದೆ. “ಚಾರ್ ಧಾಮ್ ಯಾತ್ರೆ” ಭಾಗವಾಗಿ ಭಾರತ ಮತ್ತು ವಿದೇಶಗಳಿಂದ ಯಾತ್ರಾರ್ಥಿಗಳು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಿಂದೂ ಧರ್ಮದಲ್ಲಿ, ಚಾರ್ ಧಾಮ್ ಯಾತ್ರೆಯು ಹೆಚ್ಚಿನ ಪ್ರಾಮುಖ್ಯತೆ ಮತ್ತು ಪವಿತ್ರತೆಯನ್ನು ಹೊಂದಿದೆ. ದೇವರ ಆಶೀರ್ವಾದವನ್ನು ಪಡೆಯಲು ಪ್ರತಿಯೊಬ್ಬ ಹಿಂದೂಗಳು ಜೀವನದಲ್ಲಿ ಒಮ್ಮೆಯಾದರೂ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಬೇಕು ಎಂದು ನಂಬಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.