ನವದೆಹಲಿ: ಆಪರೇಷನ್ ದೋಸ್ತ್ ಅಡಿಯಲ್ಲಿ ಭೂಕಂಪ ಪರಿಹಾರ ಕಾರ್ಯಗಳಿಗಾಗಿ ರಕ್ಷಣಾ ಸಿಬ್ಬಂದಿ, ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಹೊತ್ತ ಭಾರತದ ಆರನೇ ವಿಮಾನವು ಟರ್ಕಿಯನ್ನು ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ಮಾಹಿತಿ ನೀಡಿದ್ದಾರೆ.
ಆರನೇ ವಿಮಾನವು ಹೆಚ್ಚಿನ ಸಂಖ್ಯೆಯ ರಕ್ಷಣಾ ತಂಡಗಳು, ಶ್ವಾನ ದಳಗಳು ಮತ್ತು ಭೂಕಂಪ ಪೀಡಿತ ದೇಶಕ್ಕೆ ಅಗತ್ಯವಾದ ಔಷಧಗಳನ್ನು ಹೊತ್ತೊಯ್ದಿದೆ.
ಟ್ವಿಟ್ ಮಾಡಿರುವ ಜೈಶಂಕರ್, “ಆಪರೇಷನ್ ದೋಸ್ತ್ ಅಡಿ ವಿಮಾನವು ಟರ್ಕಿಯನ್ನು ತಲುಪಿದೆ. ಹೆಚ್ಚಿನ ಶೋಧ ಮತ್ತು ರಕ್ಷಣಾ ತಂಡಗಳು, ಶ್ವಾನದಳಗಳು, ಉಪಕರಣಗಳು, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳು ಪರಿಹಾರ ಪ್ರಯತ್ನಗಳಲ್ಲಿ ನಿಯೋಜನೆಗೆ ಸಿದ್ಧವಾಗಿವೆ ಎಂದಿದ್ದಾರೆ
ವಿದೇಶಾಂಗ ಸಚಿವಾಲಯವು ಟರ್ಕಿಯಲ್ಲಿ ಭಾರತೀಯ ಸೇನೆ ಸ್ಥಾಪಿಸಿದ ಫೀಲ್ಡ್ ಆಸ್ಪತ್ರೆಯ ಚಿತ್ರಗಳನ್ನು ಪೋಸ್ಟ್ ಮಾಡಿದೆ, ಅಲ್ಲಿ ವೈದ್ಯಕೀಯ ತಜ್ಞರು ತುರ್ತು ಚಿಕಿತ್ಸೆಗಾಗಿ ತಯಾರಿ ನಡೆಸುತ್ತಿದ್ದಾರೆ.
ಫೆಬ್ರವರಿ 6 ರಂದು ಸಂಭವಿಸಿದ ಭೀಕರ ಭೂಕಂಪಗಳ ನಂತರ, ಟರ್ಕಿ ಮತ್ತು ಪಕ್ಕದ ಸಿರಿಯಾದಲ್ಲಿ ಸಾವಿನ ಸಂಖ್ಯೆ 15,000 ಕ್ಕೂ ಅಧಿಕವಾಗಿದೆ.
This field hospital in Hatay, Türkiye will treat those affected by the earthquake.
Our team of medical & critical care specialists and equipment are preparing to treat emergencies. #OperationDost https://t.co/YVwxfJoJEf pic.twitter.com/bIsNxWxkHf
— Dr. S. Jaishankar (@DrSJaishankar) February 8, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.