News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೆಸರು ಎರಚಿದಷ್ಟೂ ಕಮಲ ಅರಳುತ್ತದೆ: ಪ್ರತಿಪಕ್ಷಗಳಿಗೆ ಮೋದಿ

ನವದೆಹಲಿ: ಅದಾನಿ ಗ್ರೂಪ್‌ ವಿರುದ್ಧದ ವರದಿ ಇಟ್ಟುಕೊಂಡು ತಮ್ಮನ್ನು ಗುರಿಯಾಗಿಸಿಕೊಂಡು ನಿರಂತರ ಆರೋಪಗಳನ್ನು ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ. “ನೀವು ನಮ್ಮ ಮೇಲೆ ಕೆಸರು ಎರಚಿದಷ್ಟೂ ಕಮಲ ಅರಳುತ್ತದೆ” ಎಂದಿದ್ದಾರೆ.

“ಕೆಲವು ಸದಸ್ಯರ ನಡವಳಿಕೆ ಮತ್ತು ಧ್ವನಿ ಇಡೀ ದೇಶಕ್ಕೆ ನಿರಾಶಾದಾಯಕವಾಗಿದೆ, ಅಂತಹವರಿಗೆ ನಾನು ಹೇಳುವುದೇನೆಂದರೆ ನೀವು ನಮ್ಮ ಮೇಲೆ ಕೆಸರು ಎರಚಿದಷ್ಟೂ ಕಮಲ ಅರಳುತ್ತದೆ. ಕಮಲಕ್ಕೆ ಅರಳಲು ಸಹಾಯ ಮಾಡಿದ್ದಕ್ಕಾಗಿ ನಾವು ಪ್ರತಿಪಕ್ಷಗಳಿಗೆ ಧನ್ಯವಾದ ಹೇಳುತ್ತೇವೆ” ಎಂದಿದ್ದಾರೆ.

ಪ್ರಧಾನಿ ಭಾಷಣ ಆರಂಭಿಸಿದ ಕೂಡಲೇ ಪ್ರತಿಪಕ್ಷದ ಸದಸ್ಯರು ಸದನದ ಮಧ್ಯಕ್ಕೆ ಧಾವಿಸಿ, ಬಿಲಿಯನೇರ್ ಗೌತಮ್ ಅದಾನಿ ಅವರ ಸಂಘಟಿತ ಸಂಸ್ಥೆ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಜೋರಾಗಿ ಒತ್ತಾಯಿಸಿದರು.

ಘೋಷಣೆಗಳ ನಡುವೆ ಮಾತು ಆರಂಭಿಸಿದ ಮೋದಿ, “ಕಾಂಗ್ರೆಸ್ ಅಭಿವೃದ್ಧಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಿತು, ಸಣ್ಣ ದೇಶಗಳು ಪ್ರಗತಿಯಲ್ಲಿರುವಾಗ ಭಾರತ ಆರು ದಶಕಗಳನ್ನು ವ್ಯರ್ಥವಾಗಿ ಕಳೆದುಕೊಂಡಿತು. ಕಾಂಗ್ರೆಸ್ ಕೇವಲ ‘ಟೋಕನಿಸಂ’ನಲ್ಲಿ ತೊಡಗಿಸಿಕೊಂಡಿದೆ, ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕಲು ಎಂದಿಗೂ ಪ್ರಯತ್ನಿಸಲಿಲ್ಲ. ನಾವು ಶಾಶ್ವತ ಪರಿಹಾರಗಳೊಂದಿಗೆ ಮುಂದುವರಿಯುತ್ತಿದ್ದೇವೆ” ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top