News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ಕಳುಹಿಸಿದ ತುರ್ತು ಪರಿಹಾರ ಸಾಮಾಗ್ರಿ ಸಿರಿಯಾಗೆ ಹಸ್ತಾಂತರ

ನವದೆಹಲಿ: ಭಾರತ ಕಳುಹಿಸಿದ ಪರಿಹಾರ ಸಾಮಗ್ರಿಗಳು, ಉಪಕರಣಗಳು ಮತ್ತು ಸಿಬ್ಬಂದಿಗಳ ತಂಡ ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಗೆ ಹೋಗಿ ತಲುಪಿವೆ.

ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 30 ಹಾಸಿಗೆಗಳ ವೈದ್ಯಕೀಯ ಸೌಲಭ್ಯವುಳ್ಳ ಫೀಲ್ಡ್ ಆಸ್ಪತ್ರೆಯನ್ನು ಹೊತ್ತ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಟರ್ಕಿಯಲ್ಲಿನ ಅದಾನವನ್ನು ತಲುಪಿವೆ. ಭಾರತೀಯ ವೈದ್ಯಕೀಯ ತಜ್ಞರ ತಂಡವು ನಡೆಯುತ್ತಿರುವ ಪರಿಹಾರ ಕಾರ್ಯಗಳಿಗೆ ಕೊಡುಗೆ ನೀಡಲಿವೆ.

ಭಾರತೀಯ ವಾಯುಪಡೆಯ ಎರಡನೇ ಸಿ-17 ಗ್ಲೋಬ್‌ಮಾಸ್ಟರ್ III ಹೆವಿ ಲಿಫ್ಟ್ ವಿಮಾನವು ನಿನ್ನೆ ತಡರಾತ್ರಿ ಟರ್ಕಿಯಲ್ಲಿರುವ ಸ್ಯಾನ್‌ಲುರ್ಫಾ ತಲುಪಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ, ಭಾರತವು ಸಿರಿಯಾಕ್ಕೆ ಕಳುಹಿಸಿದ ತುರ್ತು ಪರಿಹಾರ ನೆರವನ್ನು ಇಂದು ಬೆಳಿಗ್ಗೆ ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಸಿರಿಯಾದ ಸ್ಥಳೀಯ ಆಡಳಿತ ಮತ್ತು ಪರಿಸರದ ಉಪ ಸಚಿವ ಮೌತಾಜ್ ಡೌಜಿ ಅವರಿಗೆ ಹಸ್ತಾಂತರಿಸಲಾಯಿತು. ಪೋರ್ಟಬಲ್ ಇಸಿಜಿ ಯಂತ್ರಗಳು, ರೋಗಿಗಳ ಮಾನಿಟರ್‌ಗಳು ಮತ್ತು ಇತರ ಅಗತ್ಯ ವೈದ್ಯಕೀಯ ವಸ್ತುಗಳು ಸೇರಿದಂತೆ ತುರ್ತು ಔಷಧಿಗಳು ಮತ್ತು ಸಲಕರಣೆಗಳನ್ನು ಒಳಗೊಂಡ ರವಾನೆಯನ್ನು ನಿನ್ನೆ ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ಕಳುಹಿಸಲಾಗಿದೆ.

ಕಳುಹಿಸಲಾದ ಪರಿಹಾರ ಸಾಮಗ್ರಿಗಳಲ್ಲಿ 100 ಕ್ಕೂ ಹೆಚ್ಚು ಸಿಬ್ಬಂದಿಗಳ ಎನ್‌ಡಿಆರ್‌ಎಫ್‌ ಶೋಧ ಮತ್ತು ರಕ್ಷಣಾ ಘಟಕಗಳು, ವಿವಿಧ ಉಪಕರಣಗಳು, ವಾಹನಗಳು ಮತ್ತು ಶ್ವಾನ ದಳಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಈ ಘಟಕಗಳು ಪತ್ತೆ, ಸ್ಥಳ, ಪ್ರವೇಶ ಮತ್ತು ಹೊರತೆಗೆಯುವಿಕೆಗಾಗಿ ವಿಶೇಷ ಸಾಧನಗಳನ್ನು ಹೊಂದಿವೆ.  ಫೀಲ್ಡ್‌ ಆಪರೇಷನ್‌ ಪರಿಸ್ಥಿತಿಗಳಲ್ಲಿ 30-ಹಾಸಿಗೆಯ ವೈದ್ಯಕೀಯ ಸೌಲಭ್ಯವನ್ನು ಸ್ಥಾಪಿಸಲು ಹಲವು ಉಪಕರಣಗಳು ಹೊತ್ತೊಯ್ಯಲಾಗಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top