News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಏಕ್ ಭಾರತ್ ಶ್ರೇಷ್ಠ ಭಾರತ್‌’ ಅಡಿ ಯುವ ಸಂಗಮ ನೋಂದಣಿ ಪೋರ್ಟಲ್ ಆರಂಭ

ನವದೆಹಲಿ: ಯುವ ಸಂಗಮ ನೋಂದಣಿ ಪೋರ್ಟಲ್ ಅನ್ನು ನಿನ್ನೆ ನವದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದೆ. ಯುವ ಸಂಗಮ ಎಂಬುದು ಏಕ್ ಭಾರತ್ ಶ್ರೇಷ್ಠ ಭಾರತ್‌ನ ಸ್ಫೂರ್ತಿಯ ಅಡಿಯಲ್ಲಿ ಈಶಾನ್ಯ ಪ್ರದೇಶ ಮತ್ತು ಭಾರತದ ಉಳಿದ ಭಾಗದ ಯುವಕರ ನಡುವೆ ನಿಕಟ ಸಂಬಂಧವನ್ನು ನಿರ್ಮಿಸಲು ಆರಂಭಿಸಲಾದ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಉಪಕ್ರಮವಾಗಿದೆ.

ಉಪಕ್ರಮದ ಅಡಿಯಲ್ಲಿ 20 ಸಾವಿರಕ್ಕೂ ಹೆಚ್ಚು ಯುವಕರು ದೇಶಾದ್ಯಂತ ಪ್ರಯಾಣಿಸುತ್ತಾರೆ ಮತ್ತು ಉಪ ಸಾಂಸ್ಕೃತಿಕ ಕಲಿಕೆಯ ಅನನ್ಯ ಅವಕಾಶವನ್ನು ಪಡೆಯುತ್ತಾರೆ.

ಪೋರ್ಟಲ್‌ ಬಿಡುಗಡೆ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಮಾತನಾಡಿ, ಯುವ ಸಂಗಮ ಕಾರ್ಯಕ್ರಮವು ಇಡೀ ದೇಶದೊಂದಿಗೆ ಈಶಾನ್ಯದ ಯುವಕರನ್ನು ಸಂಪರ್ಕಿಸುವ ಕೆಲಸ ಮಾಡುತ್ತದೆ. ಈ ಕಾರ್ಯಕ್ರಮವು ಈಶಾನ್ಯದ ಯುವಕರಿಗೆ ದೇಶವನ್ನು ಅನ್ವೇಷಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದರು.

ಈ ವೈಡ್ ಕಲ್ಚರಲ್ ಎಕ್ಸ್ ಚೇಂಜ್ ಕಾರ್ಯಕ್ರಮವು ದೇಶದ ಯುವಕರಿಗೆ ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ನೈಸರ್ಗಿಕ ವೈವಿಧ್ಯತೆಯನ್ನು ಆಚರಿಸಲು ಅವಕಾಶವನ್ನು ನೀಡುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಏಕ ಭಾರತ ಶ್ರೇಷ್ಠ ಭಾರತದ ಅಡಿಯಲ್ಲಿನ ಯುವ ಸಂಗಮದ ಮೂಲಕ 18 ವರ್ಷದಿಂದ 30 ವರ್ಷದ ಯುವಕರಿಗೆ ದೇಶದ ವಿವಿಧ ರಾಜ್ಯಗಳನ್ನು ನೋಡುವ, ಅವರ ಕಲೆ, ಸಂಸ್ಕೃತಿ, ಭಾಷೆಗಳನ್ನು ಅರಿಯುವ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top