News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಬಾಯ್ಕಾಟ್‌ʼ ಸಂಸ್ಕೃತಿ‌ ಸಿನಿಮಾ ವಾತಾವರಣವನ್ನು ಹಾಳು ಮಾಡುತ್ತದೆ: ಅನುರಾಗ್‌ ಠಾಕೂರ್

ನವದೆಹಲಿ: ಬಾಲಿವುಡ್‌ನ ಯಾವುದೇ ಸಿನಿಮಾ ರಿಲೀಸ್‌ ಆದರೂ ʼಬಾಯ್ಕಟ್‌ʼ ಕರೆ ನೀಡುವುದು ಈಗ ಸಾಮಾನ್ಯ ಎಂಬಂತಾಗಿದೆ. ಈ ಸಮಸ್ಯೆ ಹಿಂದಿ ಸಿನಿಮಾ ರಂಗವನ್ನು ಹೆಚ್ಚಾಗ ಬಾಧಿಸಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಸಮಾಜದ ವಾತಾವರಣವನ್ನು ಕಲುಷಿತಗೊಳಿಸುವ ಬಹಿಷ್ಕಾರ ಸಂಸ್ಕೃತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಭಾರತ ಸರ್ಕಾರವು ಈಗಾಗಲೇ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಅನ್ನು ಸ್ಥಾಪಿಸಿದೆ. ಯಾವುದೇ ಚಲನಚಿತ್ರವು ಥಿಯೇಟರ್‌ಗೆ ಹೋಗಬೇಕಾದರೆ ಅದು ಅಲ್ಲಿಂದ ಹಾದುಹೋಗುತ್ತದೆ. ಒಂದು ಚಲನಚಿತ್ರವು ಅಲ್ಲಿಂದ ಅನುಮತಿ ಪಡೆದ ನಂತರವೇ ಥಿಯೇಟರ್‌ಗೆ ಬರುತ್ತದೆ. ಕೆಲವರು ಯಾವುದೇ ಜ್ಞಾನವಿಲ್ಲದೆ ಸುಖಾಸುಮ್ಮನೆ ಬಹಿಷ್ಕಾರಕ್ಕೆ ಕರೆ ನೀಡುತ್ತಾರೆ ಎಂದಿದ್ದಾರೆ.

ಭಾರತೀಯ ಚಲನಚಿತ್ರಗಳು ಹೆಸರು ಮಾಡುತ್ತಿವೆ ಎಂದು ಹೊಗಳಿದ ಅವರು, ಬಹಿಷ್ಕಾರದಂತಹ ಸಂಸ್ಕೃತಿಗಳು ನಮ್ಮ ಚಲನಚಿತ್ರಗಳ ವಾತಾವರಣವನ್ನು ಕಲುಷಿತಗೊಳಿಸುತ್ತವೆ ಎಂದಿದ್ದಾರೆ.

“ನಮ್ಮ ಚಿತ್ರಗಳು ಇಂದು ಜಗತ್ತಿನಲ್ಲಿ ಹೆಸರು ಮಾಡುತ್ತಿವೆ, ಅಂತಹ ಸಮಯದಲ್ಲಿ, ಈ ರೀತಿಯ ಬಹಿಷ್ಕಾರ ಮಾತುಗಳು ಪರಿಸರವನ್ನು ಕಲುಷಿತಗೊಳಿಸುತ್ತದೆ, ವಾತಾವರಣ ಹಾಳು ಮಾಡಲು ಕೆಲವೊಮ್ಮೆ ಜನರು ಸಂಪೂರ್ಣ ಮಾಹಿತಿಯಿಲ್ಲದೆ ಕಾಮೆಂಟ್ ಮಾಡುತ್ತಾರೆ, ನಂತರ ಅದು ಹಾನಿಯನ್ನುಂಟುಮಾಡುತ್ತದೆ, ಇದು ನಡೆಯಬಾರದು” ಎಂದು ಮುಂಬೈನಲ್ಲಿ ಠಾಕೂರ್ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top