ನವದೆಹಲಿ: ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ಉರ್ಸ್ ಮೇಲೆ ಅರ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ಇತರರಿಗೆ ಮಂಗಳವಾರ ಚಾದರ್ ಹಸ್ತಾಂತರಿಸಿದ್ದಾರೆ.
ಪ್ರಸ್ತುತ ದರ್ಗಾದಲ್ಲಿ ಉರುಸ್ ನಡೆಯುತ್ತಿದೆ. ಪ್ರಧಾನ ಮಂತ್ರಿಗಳು ಪ್ರತಿವರ್ಷ ಚಾದರ್ ಅನ್ನು ನೀಡುತ್ತಾ ಬಂದಿದ್ದಾರೆ. ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅಜ್ಮೇರಿ ಹದಿಮೂರನೇ ಶತಮಾನದ ಸೂಫಿ ಸಂತರಾಗಿದ್ದಾರೆ. ಅವರು ಇರಾನ್ನ ಸಿಸ್ತಾನ್ನಲ್ಲಿ ಜನಿಸಿ, ಅಜ್ಮೀರ್ ಷರೀಫ್ನಲ್ಲಿ ನಿಧನರಾದರು.
ಇಸ್ಲಾಂ ಮತ್ತು ಮಾನವೀಯತೆಗಾಗಿ ಅವರ ಮಹಾನ್ ಸೇವೆಗಳನ್ನು ಸ್ಮರಿಸಲು ಪ್ರತಿ ವರ್ಷ 6 ನೇ ರಜಬ್ (ಇಸ್ಲಾಮಿಕ್ ಕ್ಯಾಲೆಂಡರ್ನ ಏಳನೇ ತಿಂಗಳು) ರಂದು ಅವರ ಉರುಸ್ ಅನ್ನು ಆಚರಿಸಲಾಗುತ್ತದೆ.
Handed over the Chadar which would be offered on the Urs of Khwaja Moinuddin Chishti at the Ajmer Sharif Dargah. pic.twitter.com/dlLgPKxDWd
— Narendra Modi (@narendramodi) January 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.