News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾರಮುಲ್ಲಾ: ಮರದ ಸೇತುವೆ ನಿರ್ಮಿಸಿ ಜನರ ಕಷ್ಟ ಪರಿಹರಿಸಿದ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬೋನಿಯಾರ್ ತೆಹಸಿಲ್‌ನ ದೂರದ ಪ್ರದೇಶದ ದೂರದ ಹಳ್ಳಿಯಾದ ಘಗ್ಗರ್ ಹಿಲ್‌ನಲ್ಲಿ ಸೇತುವೆ ಇಲ್ಲದ ಸಾಕಷ್ಟು ಕಷ್ಟಪಡುತ್ತಿದ್ದರು. ಇದೀಗ ಅವರ ಕಷ್ಟವನ್ನು ಭಾರತೀಯ ಸೇನೆ ಪರಿಹರಿಸಿದೆ.

ಘಗ್ಗರ್‌ ಹಿಲ್ ಗ್ರಾಮಸ್ಥರು  ಸೇತುವೆ ಇಲ್ಲದ ಕಾರಣ ನಿತ್ಯ ಹಪತ್ ಖಾಯಿ ಎಂಬ ತೊರೆಯನ್ನು ದಾಟಿ ಅತ್ತಿತ್ತ ಹೋಗಬೇಕಾಗಿತ್ತು. ಇದರಿಂದ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು‌ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

ಸ್ಥಳೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾಹಿತಿ ಪಡೆದ ಭಾರತೀಯ ಸೇನೆಯು ಗುರುವಾರ ಪಾರೊದಲ್ಲಿ ತಾತ್ಕಾಲಿಕ ಪರಿಹಾರವನ್ನು ಒದಗಿಸಲು ಕಾರ್ಯಾಚರಣೆಗೆ ಇಳಿದಿದೆ.
ಚಿನಾರ್ ವಾರಿಯರ್ಸ್ 20 ಅಡಿ ಉದ್ದ ಮತ್ತು ಮೂರು ಅಡಿ ಅಗಲದ ತಾತ್ಕಾಲಿಕ ಮರದ ಸೇತುವೆಯನ್ನು ರಚಿಸಿದ್ದಾರೆ. ಈ ಸೇತುವೆಗಾಗಿ ಸತ್ತ ಮರ ಮತ್ತು ಮಿಲಿಟರಿ ನಿರ್ಮಾಣ ಉಪಕರಣಗಳನ್ನು ಬಳಸಲಾಗಿದೆ.

ತಾತ್ಕಾಲಿಕ ಸೇತುವೆಯಿಂದಾಗಿ ರೋಗಿಗಳು, ಮಕ್ಕಳು ಮತ್ತು ಗರ್ಭಿಣಿಯರು ಖಾಯಿ ನಾಲಾ ಮೂಲಕ ಘಗ್ಗರ್ ಹಿಲ್ ಗ್ರಾಮಕ್ಕೆ ತಲುಪಲು ಎದುರಿಸುತ್ತಿದ್ದ ಸವಾಲುಗಳನ್ನು ನಿವಾರಿಸಿದೆ.

ಭಾರತೀಯ ಸೇನೆಯು, ಗ್ರಾಮಸ್ಥರೊಂದಿಗೆ ಒಗ್ಗಟ್ಟಿನಿಂದ ಇಂತಹ ದೂರದ ದೂರದ ಹಳ್ಳಿಗಳಲ್ಲಿ ಮಾನವೀಯ ಸಹಾಯ ಮಾಡುವ ಕಾರ್ಯವನ್ನು ಸದಾ ಮಾಡುತ್ತಲೇ ಬಂದಿದೆ.

ಈ ಹಿಂದೆ, ಭಾರತೀಯ ಸೇನೆಯು 11ಕ್ಕೂ ಹೆಚ್ಚು ಅಸ್ವಸ್ಥ ಗ್ರಾಮಸ್ಥರನ್ನು ಹಿಮದಿಂದ ತುಂಬಿದ ಮತ್ತು ಹಿಮದಿಂದ ಆವೃತವಾದ ರಸ್ತೆಗಳ ಮೇಲೆ ಹತ್ತಿರದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top