News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೋಶಿಮಠ ಸಂತ್ರಸ್ಥರ ನೀರು, ವಿದ್ಯುತ್‌ ಬಿಲ್‌ ಮನ್ನಾ, ಸಾಲ ಪಾವತಿಗೆ ತಡೆ

ನವದೆಹಲಿ: ಉತ್ತರಾಖಂಡ ಜೋಶಿಮಠದ ಭೂಮಿ ಕುಸಿತದಿಂದಾಗಿ ಅಲ್ಲಿನ ಜನರ ಭವಿಷ್ಯ ಅತಂತ್ರಗೊಂಡಿದೆ. ನೆಲೆ ಕಳೆದುಕೊಂಡು ಬದುಕುವುದೇಗೆ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಮೂಡಿದೆ. ಸಂತ್ರಸ್ತರಾಗಿರುವ ಜನರು ತಮ್ಮ ಜೀವನದ ಬಗ್ಗೆ ತೀವ್ರ ಚಿಂತಿತರಾಗಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಥಳಾಂತರಗೊಂಡ ಕುಟುಂಬಗಳ ಹೊರೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜೋಶಿಮಠ ಭೂ ಕುಸಿತದಿಂದ ಸಂತ್ರಸ್ತರಾಗಿರುವ ಜನರ ಕಲ್ಯಾಣ ಮತ್ತು ಪುನರ್ವಸತಿಗಾಗಿ ಧಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆಯಿತು. ಉತ್ತರಾಖಂಡ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಉತ್ತರಾಖಂಡ ಸರ್ಕಾರವು ಸಂತ್ರಸ್ತ ಕುಟುಂಬಗಳ ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಆರು ತಿಂಗಳವರೆಗೆ ಮನ್ನಾ ಮಾಡಲು ನಿರ್ಧರಿಸಿದೆ. ಅಲ್ಲದೇ ಉತ್ತರಾಖಂಡದ ಬೆಟ್ಟಗಳಲ್ಲಿರುವ ಎಲ್ಲಾ ಪಟ್ಟಣಗಳ ಜನರನ್ನು ಹಿಡಿದಿಡುವ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ.

ಅಲ್ಲದೇ ಜೋಶಿಮಠದ ಸಂತ್ರಸ್ತರ ಬ್ಯಾಂಕ್ ಸಾಲ ಮರುಪಾವತಿಯನ್ನು ಒಂದು ವರ್ಷದವರೆಗೆ ತಡೆಹಿಡಿಯಲು ಧಮಿ ಸಂಪುಟ ನಿರ್ಧರಿಸಿದೆ. ಸಹಕಾರಿ ಬ್ಯಾಂಕ್‌ಗಳು ಸಾಲ ಮರುಪಾವತಿಯ ಮೇಲಿನ ಒಂದು ವರ್ಷದ ಮೊರಟೋರಿಯಂ ಅನ್ನು ತಕ್ಷಣವೇ ಜಾರಿಗೆ ತರುತ್ತವೆ,  ವಾಣಿಜ್ಯ ಬ್ಯಾಂಕುಗಳು ಕೂಡ ಇದೇ ರೀತಿಯ ಕ್ರಮಕೈಗೊಳ್ಳಬೇ ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಎಸ್‌ಎಸ್ ಸಂಧು ಹೇಳಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ಮಾಸಿಕ ಬಾಡಿಗೆ ಪಾವತಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಮೊತ್ತವನ್ನು ತಿಂಗಳಿಗೆ 4,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲು ಸಂಪುಟ ನಿರ್ಧರಿಸಿದೆ. ಜಿಲ್ಲಾಧಿಕಾರಿಗಳ ಶಿಫಾರಸಿನ ಮೇರೆಗೆ ಅದನ್ನು ಇನ್ನಷ್ಟು ಹೆಚ್ಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ. ಜೋಶಿಮಠದ ಜನರು 4000 ರೂ ಬಾಡಿಗೆ ತುಂಬಾ ಕಡಿಮೆಯಾಗಿದೆ ಎಂದು ದೂರುತ್ತಿದ್ದಾರೆ.

ಹೋಟೆಲ್‌ಗಳು ಮತ್ತು ವಸತಿ ಘಟಕಗಳಲ್ಲಿ ನಿರ್ಮಿಸಲಾದ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ತಂಗಿರುವ ಪ್ರತಿ ಸಂತ್ರಸ್ತ ಕುಟುಂಬಕ್ಕೆ ಅವರ ವಾಸ್ತವ್ಯಕ್ಕಾಗಿ ದಿನಕ್ಕೆ ರೂ 950 ಮತ್ತು ವೆಚ್ಚಕ್ಕಾಗಿ ತಲಾ ರೂ 450 ನೀಡಲಾಗುವುದು. ಅಲ್ಲದೆ, ದೊಡ್ಡ ಪ್ರಾಣಿಗಳಿಗೆ ಮೇವು ಖರೀದಿಸಲು ದಿನಕ್ಕೆ 80 ರೂ., ಚಿಕ್ಕ ಪ್ರಾಣಿಗಳಿಗೆ 45 ರೂ. ನೀಡಲಾಗುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top