News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವರದಿ ಪ್ರಸಾರದ ಬಗ್ಗೆ ಮಾಧ್ಯಮಗಳಿಗೆ ಕೆಲವೊಂದು ಸಲಹೆ ನೀಡಿದ ಸರ್ಕಾರ

ನವದೆಹಲಿ: ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು ಟಿವಿ ಚಾನೆಲ್‌ಗಳಿಗೆ ಬಲವಾದ ಸಲಹೆಯನ್ನು ನೀಡಿದ್ದು, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯಿದೆ, 1995 ರ ಅಡಿಯಲ್ಲಿ ಸ್ಥಾಪಿಸಲಾದ ಕಾರ್ಯಕ್ರಮ ಸಂಹಿತೆಗೆ ಬದ್ಧವಾಗಿರುವಂತೆ ಸೂಚಿಸಿದೆ. ಅಲ್ಲದೇ ಸರ್ಕಾರವು ಕಳೆದ ಕೆಲವು ತಿಂಗಳುಗಳಲ್ಲಿ ಸುದ್ದಿ ಪ್ರಸಾರ ಸೇರಿದಂತೆ ಹಲವು ವಿಷಯಗಳಲ್ಲಿ ಉಲ್ಲಂಘನೆಗಳನ್ನು ಗಮನಿಸಿದೆ ಎಂಬುದಾಗಿ ತಿಳಿಸಿದೆ.

ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಬಗೆಗಿನ ವರದಿಗಳು ಸಂಹಿತೆಗೆ ವಿರುದ್ಧೌಾಗಿತ್ತು ಎಂದು ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಟೆಲಿವಿಷನ್ ಚಾನೆಲ್‌ಗಳು ಅಪಘಾತಗಳು, ಸಾವುಗಳು ಮತ್ತು ಹಿಂಸಾಚಾರದ ಘಟನೆಗಳನ್ನು ವರದಿ ಮಾಡುವಾಗ ಒಳ್ಳೆಯ ಅಭಿರುಚಿ ಮತ್ತು ಸಭ್ಯತೆಯಲ್ಲಿ ರಾಜಿ ಮಾಡಿಕೊಂಡಿದೆ ಮತ್ತು ಸಾಮಾನ್ಯ ವೀಕ್ಷಕರ ಕಣ್ಣು ಮತ್ತು ಕಿವಿಗಳಿಗೆ ಸಾಕಷ್ಟು ಅಸಹ್ಯಕರವಾದ ರೀತಿಯಲ್ಲಿ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದಿದೆ.

ಪ್ರಸಾರಕರಿಗೆ ಜವಾಬ್ದಾರಿ ಮತ್ತು ಶಿಸ್ತಿನ ಪ್ರಜ್ಞೆಯನ್ನು ನೆನಪಿಸಿರುವ ಸಚಿವಾಲಯ, ಹಿಂಸಾತ್ಮಕ ಘಟನೆಗಳನ್ನು ವರದಿ ಮಾಡುವಾಗ ಚಿತ್ರಗಳನ್ನು ಮಸುಕುಗೊಳಿಸುವ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಮತ್ತು ಅವುಗಳನ್ನು ದೀರ್ಘ ಅವಧಿಗೆ ತೋರಿಸುವುದನ್ನು ತಪ್ಪಿಸಬೇಕು.  ಅಸಹ್ಯಕರ, ಹೃದಯ ವಿದ್ರಾವಕ, ದುಃಖಕರ, ಅವಮಾನಕರ ರೀತಿಯಲ್ಲಿ ವರದಿ ಮಾಡದೆ ಸಂವೇದನಾಶೀಲವಾಗಿರಬೇಕು ಎಂದಿದೆ.

ಇಂತಹ ವರದಿಗಳು ಮಕ್ಕಳ ಮೇಲೆ ಪ್ರತಿಕೂಲ ಮಾನಸಿಕ ಪರಿಣಾಮವನ್ನು ಬೀರುತ್ತವೆ. ಗೌಪ್ಯತೆಗೂ ಇದು ಧಕ್ಕೆ ತರುತ್ತದೆ ಎಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top