News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಥುರಾ: ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ಆರಂಭ

ನವದೆಹಲಿ: ಮಥುರಾದ ವಿವಾದಿತ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯನ್ನು ಇಂದು ಆರಂಭಿಸಲಾಗಿದ್ದು, ಜನವರಿ 20ರೊಳಗೆ ಸಮೀಕ್ಷೆಯ ವರದಿಯನ್ನು ಸಲ್ಲಿಸಲಾಗುತ್ತಿದೆ.

ಡಿಸೆಂಬರ್ 24 ರಂದು ಆದೇಶ ನೀಡಿದ್ದ ಜಿಲ್ಲಾ ನ್ಯಾಯಾಲಯ, ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯನ್ನು ಜನವರಿ 2 ರಂದು ಸೋಮವಾರ ಆರಂಭಿಸಬೇಕು ಮತ್ತು ಜನವರಿ 20 ರೊಳಗೆ ಸಮೀಕ್ಷೆಯ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿತ್ತು. ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ನಡೆಸುವಂತೆ ಮತ್ತು ಸ್ಥಳದಲ್ಲಿ ಇರುವ ಹಿಂದೂ ಚಿಹ್ನೆಗಳನ್ನು ಪರಿಶೀಲಿಸುವಂತೆ ಹಿಂದೂ ಸೇನೆ ಸಲ್ಲಿಸಿದ ಮನವಿಯ ಮೇರೆಗೆ ಈ ಆದೇಶವನ್ನು ನೀಡಲಾಗಿದೆ.

1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಈ ಮಸೀದಿಯನ್ನು ಶ್ರೀಕೃಷ್ಣನ ಜನ್ಮಸ್ಥಳದ ಬಳಿಯ ಕತ್ರಾ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ಹಿಂದೂ ಸೇನೆ ವಾದಿಸಿದೆ.

”ಪ್ರಕರಣದ ಬಗ್ಗೆ ದಾಖಲೆಯ ಸಾಕ್ಷ್ಯಗಳಿವೆ. ಠಾಕೂರ್ ಜೀ ಅವರ ಹೆಸರಿನಲ್ಲಿರುವ 13.73 ಎಕರೆ ಭೂಮಿಗೆ ನಮ್ಮ ಬಳಿ ಪುರಾವೆ ಇದೆ. ಈ ಜಮೀನು ಠಾಕೂರ್‌ಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ನಮ್ಮ ಬಳಿ 400 ವರ್ಷಗಳ ಹಳೆಯ ದಾಖಲೆಗಳಿವೆ. ಇದಲ್ಲದೆ, ಔರಂಗಜೇಬನು ಮಸೀದಿಯನ್ನು ನಿರ್ಮಿಸಿದಾಗ ದೇವಾಲಯದ ಕೆಲವು ರಚನೆಗಳನ್ನು ಮಸೀದಿಯನ್ನು ನಿರ್ಮಿಸಲು ಬಳಸಲಾಯಿತು. ಇದಕ್ಕೆ ಸಂಬಂಧಿಸಿದ ಪುರಾವೆಗಳು ಸಹ ಸ್ಥಳದಲ್ಲಿ ಕಂಡುಬರುತ್ತವೆ ”ಎಂದು ಹಿಂದೂ ಸೇನೆಯನ್ನು ಪ್ರತಿನಿಧಿಸುವ ವಕೀಲ ಶೈಲೇಶ್ ದುಬೆ ತಿಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top