News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೀರ ಬಾಲ ದಿವಸ: ಔರಂಗಜೇಬನ ಕ್ರೂರತ್ವ ನೆನಪಿಸಿದ ಮೋದಿ

ನವದೆಹಲಿ: ತಮ್ಮ ನಂಬಿಕೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್ ಅವರ ಬಲಿದಾನದ ದಿವಸವನ್ನು ಇಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಮೋದಿ, “ಔರಂಗಜೇಬ, ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್  ಅವರನ್ನು ಬಲವಂತವಾಗಿ ಇಸ್ಲಾಂಗೆ ಪರಿವರ್ತಿಸಲು ಬಯಸಿದ್ದ ಆದರೆ ಅವರು  ಕ್ರೂರ ಆಡಳಿತಗಾರನಿಗೆ ತಲೆಬಾಗಲಿಲ್ಲ ಎಂದಿದ್ದಾರೆ.

ಯುವಕರು ಭಾರತದ ಭವಿಷ್ಯವನ್ನು ನಿರ್ಧರಿಸುತ್ತಾರೆ ಮತ್ತು ಅವರು ತಮ್ಮ ಸ್ಫೂರ್ತಿಯ ಮೂಲವನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳುವುದು ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು.

“ಔರಂಗಜೇಬನ ಭಯೋತ್ಪಾದನೆ ಮತ್ತು ಭಾರತವನ್ನು ಪರಿವರ್ತಿಸುವ ಅವನ ಯೋಜನೆಗಳ ವಿರುದ್ಧ ಗುರು ಗೋವಿಂದ್ ಸಿಂಗ್ ಅವರು ಪರ್ವತದಂತೆ ನಿಂತ ಸಮಯವನ್ನು ಊಹಿಸಿ.  ಔರಂಗಜೇಬ್ ಮತ್ತು ಅವನ ಆಡಳಿತವು ಜೋರಾವರ್ ಸಿಂಗ್ ಸಾಹಿಬ್ ಮತ್ತು ಫತೇಹ್ ಸಿಂಗ್ ಸಾಹಿಬ್ ಅವರಂತಹ ಚಿಕ್ಕ ಮಕ್ಕಳೊಂದಿಗೆ ಯಾವ ರೀತಿಯ ದ್ವೇಷವನ್ನು ಹೊಂದಿತ್ತು?  ಇಬ್ಬರು ಮುಗ್ಧ ಮಕ್ಕಳನ್ನು ಸಜೀವವಾಗಿ ಗೋಡೆಯಲ್ಲಿ ಹೂತುಹಾಕಿದಂತಹ ಕ್ರೌರ್ಯವನ್ನು ಅವನು ಎಸಗಿದ. ಔರಂಗಜೇಬ್ ಮತ್ತು ಅವನ ಜನರು ಕತ್ತಿ ಹಿಡಿದು ಗುರು ಗೋವಿಂದ್ ಸಿಂಗ್ ಅವರ ಮಕ್ಕಳ ಧರ್ಮವನ್ನು ಪರಿವರ್ತಿಸಲು ಬಯಸಿದ್ದರು.ಆದರೆ ಆ ವೀರ ಹುಡುಗರು ಹೆದರಲಿಲ್ಲ” ಎಂದಿದ್ದಾರೆ.

ಯುವಕರು ತಮ್ಮ ಧೈರ್ಯದ ಮೂಲಕ ಕಾಲದ ಪ್ರವಾಹವನ್ನು ಕೂಡ ಶಾಶ್ವತವಾಗಿ ತಿರುಗಿಸಬಹುದು. ಭಾರತದ ಯುವ ಪೀಳಿಗೆ ತಮ್ಮ ಸಂಕಲ್ಪದಿಂದ ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ ಎಂದಿದ್ದಾರೆ.

“ಭಾರತದ ಭವಿಷ್ಯದ ಪೀಳಿಗೆಯ ದಿಕ್ಕು ಅವರು ಸ್ಫೂರ್ತಿ ಪಡೆಯುವ ಅವರ ರೋಲ್ ಮಾಡೆಲ್‌ಗಳ ಮೇಲೆ ಅವಲಂಬಿತವಾಗಿದೆ. ಭಾರತದ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಪ್ರತಿಯೊಂದು ಮೂಲವೂ ಈ ನೆಲದಲ್ಲಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top