News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗರ್ಭಕಂಠದ ಕ್ಯಾನ್ಸರ್ ತಡೆಗೆ ಜಾಗೃತಿ ಮೂಡಿಸಲು ರಾಜ್ಯಗಳಿಗೆ ಕೇಂದ್ರ ಕರೆ

ನವದೆಹಲಿ: ದೇಶಾದ್ಯಂತ ಬಾಲಕಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಎಚ್‌ಪಿವಿ ಲಸಿಕೆ ಪ್ರಾಮುಖ್ಯತೆಯ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿದೆ.

ಸೋಂಕು ತಡೆಗಟ್ಟುವಿಕೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ), ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ 9-14 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರಿಗೆ ಒಂದು ಬಾರಿ ಎಚ್‌ಪಿವಿ  ಲಸಿಕೆಯನ್ನು ನೀಡಲು ಶಿಫಾರಸು ಮಾಡಿದೆ. ನಿಯಮಿತವಾಗಿ 9ನೇ ವರ್ಷದಲ್ಲಿ ಅದನ್ನು ನೀಡಲಾರಂಭಿಸಬೇಕೆಂದು ಹೇಳಿದೆ.

ಲಸಿಕೆಯನ್ನು ಪ್ರಾಥಮಿಕವಾಗಿ ಶಾಲೆಗಳ ಮೂಲಕ ಒದಗಿಸಬೇಕು. ಅಭಿಯಾನದ ದಿನದಂದು ಶಾಲೆಗೆ ಹಾಜರಾಗಲು ಸಾಧ್ಯವಾಗದ ಬಾಲಕಿಯರನ್ನು ತಲುಪಲು ಲಸಿಕೆಯನ್ನು ಆರೋಗ್ಯ ಸೌಕರ್ಯಗಳಲ್ಲಿ ಒದಗಿಸಬೇಕು ಮತ್ತು ಶಾಲೆಯಿಂದ ಹೊರಗುಳಿದಿರುವ ಹುಡುಗಿಯರಿಗೆ ಸಮುದಾಯ ಜನಸಂಪರ್ಕ ಮತ್ತು ಸಂಚಾರಿ ತಂಡಗಳ ಮೂಲಕ ಅಭಿಯಾನ ತಲುಪಿಸಬೇಕು ಎಂದಿದೆ.

ಕೇಂದ್ರ ಶಿಕ್ಷಣ ಕಾರ್ಯದರ್ಶಿ  ಸಂಜಯ್ ಕುಮಾರ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ  ರಾಜೇಶ್ ಭೂಷಣ್ ಜಂಟಿಯಾಗಿ ಬರೆದಿರುವ ಪತ್ರದಲ್ಲಿ, ” ಜಾಗತಿಕವಾಗಿ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ 4ನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂದು  ದೃಢಪಟ್ಟಿದೆ. ಭಾರತದಲ್ಲಿ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ ಮತ್ತು ಜಾಗತಿಕ ಗರ್ಭಕಂಠದ ಕ್ಯಾನ್ಸರ್ ಹೊರೆಗೆ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಅದನ್ನು ಮೊದಲೇ ಪತ್ತೆಹಚ್ಚಿ ಮತ್ತು ದೋಷವಾಗದಂತೆ ನಿರ್ವಹಿಸಿದರೆ ಅದನ್ನು ತಡೆಬಹುದಾಗಿದೆ. ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು ಹ್ಯೂಮನ್ ಪ್ಯಾಪಿಲೋಮಾ ವೈರಸ್‌ಗೆ (ಎಚ್‌ಪಿವಿ) ಸಂಬಂಧಿಸಿವೆ ಮತ್ತು ಹುಡುಗಿಯರು ಅಥವಾ ಮಹಿಳೆಯರು ವೈರಸ್‌ಗೆ ತೆರೆದುಕೊಳ್ಳುವ ಮೊದಲು ಲಸಿಕೆಯನ್ನು ನೀಡಿದರೆ  ಗರ್ಭಕಂಠದ ಕ್ಯಾನ್ಸರ್ ಪ್ರಕರಣ ತಡೆಗಟ್ಟಬಹುದಾಗಿದೆ. ಲಸಿಕೆ ಮೂಲಕ ತಡೆಗಟ್ಟುವುದು ಗರ್ಭಕಂಠದ ಕ್ಯಾನ್ಸರ್ ಅನ್ನು ತೊಡೆದುಹಾಕಲು ವಿಶ್ವ ಆರೋಗ್ಯ ಸಂಸ್ಥೆ ಅಳವಡಿಸಿಕೊಂಡ ಜಾಗತಿಕ ಕಾರ್ಯತಂತ್ರದ ಆಧಾರಸ್ತಂಭಗಳಲ್ಲಿ ಒಂದಾಗಿದೆ” ಎಂದು ಬರೆಯಲಾಗಿದೆ.

ಅಭಿಯಾನವನ್ನು ಯಶಸ್ವಿಗೊಳಿಸಲು ಪತ್ರದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತ ಮಟ್ಟದಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ:

* ಲಸಿಕೆಗಾಗಿ ಶಾಲೆಗಳಲ್ಲಿ ಎಚ್‌ಪಿವಿ ಲಸಿಕಾ ಕೇಂದ್ರಗಳನ್ನು ತೆರೆಯುವುದು.

* ಜಿಲ್ಲಾ ಲಸಿಕಾ ಅಧಿಕಾರಿಯನ್ನು ಬೆಂಬಲಿಸಲು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಡಿಯಲ್ಲಿ ಜಿಲ್ಲಾ ಲಸಿಕಾ ಕಾರ್ಯಪಡೆಯ (ಡಿಟಿಎಫ್‌ಐ) ಪ್ರಯತ್ನಗಳ ಭಾಗವಾಗಲು ಜಿಲ್ಲಾ ಶಿಕ್ಷಣ ಅಧಿಕಾರಿಗೆ ನಿರ್ದೇಶನ ನೀಡುವುದು.

* ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಸಮನ್ವಯ ಸಾಧಿಸುವುದು.

* ಲಸಿಕಾ ಚಟುವಟಿಕೆಗಳನ್ನು ಸಂಘಟಿಸಲು ಪ್ರತಿ ಶಾಲೆಯಲ್ಲಿ ನೋಡಲ್ ವ್ಯಕ್ತಿಯನ್ನು ಗುರುತಿಸುವುದು ಮತ್ತು ಶಾಲೆಯಲ್ಲಿ 9-14 ವರ್ಷ ವಯಸ್ಸಿನ ಹುಡುಗಿಯರ ಸಂಖ್ಯೆಯನ್ನು ಒಟ್ಟುಗೂಡಿಸುವುದು ಮತ್ತು ಯು-ವಿನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್‌ಲೋಡ್ ಮಾಡುವುದು.

* ವಿಶೇಷ ಪೋಷಕರು-ಶಿಕ್ಷಕರ ಸಭೆ (ಪಿಟಿಎ) ಸಮಯದಲ್ಲಿ ಎಲ್ಲಾ ಪೋಷಕರಿಗೆ ಶಾಲಾ ಶಿಕ್ಷಕರ ಮೂಲಕ ಜಾಗೃತಿ ಮೂಡಿಸುವುದು.

* ಸಣ್ಣ ಪ್ರಮಾಣದಲ್ಲಿ ಯೋಜನೆಗಳನ್ನು ರೂಪಿಸಲು ಪ್ರತಿ ವಲಯದಲ್ಲಿ ಎಲ್ಲಾ ರೀತಿಯ ಶಾಲೆಗಳ (ಯುಡಿಐಎಸ್‌ಇ+) ಅಪ್-ಟು-ಡೇಟ್ ಪಟ್ಟಿಯನ್ನು ರಚಿಸುವಲ್ಲಿ ಬೆಂಬಲ ಪಡೆಯುವುದು ಮತ್ತು ಶಾಲೆಗಳ ಜಿಐಎಸ್ ಮ್ಯಾಪಿಂಗ್‌ಗೆ ಪಡೆದುಕೊಂಡು ಜಿಲ್ಲೆಗಳ ಲಸಿಕಾ ಅಧಿಕಾರಿಗಳು ಲಸಿಕಾ ಅಭಿಯಾನಕ್ಕಾಗಿ ಸಣ್ಣ ಪ್ರಮಾಣದ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.

* ಪರೀಕ್ಷೆ ಮತ್ತು ರಜೆಯ ತಿಂಗಳುಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಲಸಿಕಾ ಅಭಿಯಾನವನ್ನು ಯೋಜಿಸಲು ಆರೋಗ್ಯ ತಂಡಗಳಿಗೆ ಬೆಂಬಲ ನೀಡುವುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top