News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿಯಿಂದಾಗಿ ಉಕ್ರೇನ್‌ ಮೇಲೆ ರಷ್ಯಾದ ಪರಮಾಣು ದಾಳಿ ತಪ್ಪಿತು : ಸಿಐಎ ಮುಖ್ಯಸ್ಥ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಶ್ಲಾಘನೆ ವ್ಯಕ್ತಪಡಿಸಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಕುರಿತಾದ ಮೋದಿ ಅಭಿಪ್ರಾಯಗಳು ರಷ್ಯನ್ನರ ಮೇಲೆ ಪ್ರಭಾವ ಬೀರಿವೆ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಜಾಗತಿಕ ವಿಪತ್ತನ್ನು ತಪ್ಪಿಸುವಂತೆ ಮಾಡಿದೆ ಎಂದು ಸಿಎಐ ಮುಖ್ಯಸ್ಥ ಬಿಲ್ ಬರ್ನ್ಸ್ ಅವರು ಅಭಿಪ್ರಾಯಿಸಿದ್ದಾರೆ.

ಚೀನಾದ ಪ್ರಧಾನಿ ಕ್ಸಿ ಜಿನ್‌ಪಿಂಗ್ ಮತ್ತು ಪಿಎಂ ಮೋದಿ ಅವರು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದು ರಷ್ಯಾ ಉಕ್ರೇನ್‌ ಮೇಲೆ ಪರಮಾಣು ದಾಳಿ ಮಾಡದಂತೆ ತಡೆಯಲು ಉಪಯುಕ್ತವಾಗಿದೆ ಎಂದು ಬರ್ನ್ಸ್ ಹೇಳಿದ್ದಾರೆ.

ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ರಷ್ಯಾದ ಯೋಜನೆಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲದಿದ್ದರೂ, ಉಕ್ರೇನ್ ಅನ್ನು ಬೆದರಿಸುವ ಉದ್ದೇಶದಿಂದ ಅದು ಬೆದರಿಕೆಯೊಡ್ಡಿತ್ತು ಎಂದಿದ್ದಾರೆ.

ಹೆಚ್ಚುತ್ತಿರುವ ಪರಮಾಣು ಯುದ್ಧದ ಬೆದರಿಕೆಯ ಬಗ್ಗೆಯೂ ಬರ್ನ್ಸ್ ಎಚ್ಚರಿಸಿದ್ದು, ಕ್ರೆಮ್ಲಿನ್‌ನಲ್ಲಿ ನಡೆದ ರಷ್ಯಾದ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಪುಟಿನ್ ತಮ್ಮ ಭಾಷಣದಲ್ಲಿ, ರಷ್ಯಾ ತನ್ನ ರಕ್ಷಣೆಗೆ ಲಭ್ಯವಿರುವ ಎಲ್ಲಾ ವಿಧಾನಗಳಿಂದ ಹೋರಾಡುತ್ತದೆ ಎಂದು ಹೇಳಿದ್ದರು. ಪುಟಿನ್ ಅವರು ಮಾಸ್ಕೋದ ಪರಮಾಣು ಶಸ್ತ್ರಾಗಾರವನ್ನು ‘ಪ್ರಚೋದನೆಗಿಂತ ಹೆಚ್ಚಾಗಿ ತಡೆಗಟ್ಟುವಿಕೆ’ ಎಂದು ಪರಿಗಣಿಸಿದ್ದಾರೆ ಎಂದಿದ್ದಾರೆ .

ಗಮನಾರ್ಹವಾಗಿ, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಕರೆ ನೀಡುತ್ತಿದೆ. ಡಿಸೆಂಬರ್ 16 ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಹಾರಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆಯ ಏಕೈಕ ಮಾರ್ಗವಾಗಿದೆ ಎಂದು  ಪುನರುಚ್ಚರಿಸಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top