News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾರಿಡಾರ್ ಉದ್ಘಾಟನೆ ಬಳಿಕ 7.35 ಮಿಲಿಯನ್ ಭಕ್ತರನ್ನು ಸೆಳೆದ ಕಾಶಿ

ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾ ನದಿ ಘಾಟ್‌ಗಳೊಂದಿಗೆ ಸಂಪರ್ಕಿಸುವ  ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನೆಯಾದ ಒಂದು ವರ್ಷದೊಳಗೆ ಪವಿತ್ರ ಕಾಶಿ ದಾಖಲೆಯ ಭಕ್ತರನ್ನು ಕಂಡಿದೆ. ಭಕ್ತರ ದೇಣಿಗೆಯಲ್ಲೂ ಸುಮಾರು ಐದು ಪಟ್ಟು ಹೆಚ್ಚಳವಾಗಿದೆ.

ಕಾಶಿ ವಿಶ್ವನಾಥ ಧಾಮ ಎಂದು ಕರೆಯಲ್ಪಡುವ ಹೊಸದಾಗಿ ನಿರ್ಮಿಸಲಾದ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೊಂಡು ಡಿಸೆಂಬರ್ 13ಕ್ಕೆ ಒಂದು ವರ್ಷವನ್ನು ಪೂರೈಸಿದೆ.

ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮಹತ್ವಾಕಾಂಕ್ಷೆಯ ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಿದಾಗಿನಿಂ, ದೇವಾಲಯವು 7.35 ಮಿಲಿಯನ್ ಯಾತ್ರಾರ್ಥಿಗಳನ್ನು ಸೆಳೆದಿದೆ ಮತ್ತು  ಒಟ್ಟು 100 ಕೋಟಿ ರೂಪಾಯಿಗಳನ್ನು ದೇಣಿಗೆ ಸಂಗ್ರಹಿಸಿದೆ.

ದೇವಾಲಯದ ಮಾಹಿತಿಯ ಪ್ರಕಾರ, ಡಿಸೆಂಬರ್ 2021 ರಲ್ಲಿ 4,842,716 ಯಾತ್ರಿಕರು ಕಾಶಿ ವಿಶ್ವನಾಥ ಧಾಮ್ ತಲುಪಿದ್ದರೆ, 7,459,471 ಭಕ್ತರು ಜನವರಿಯಲ್ಲಿ ಭೇಟಿ ನೀಡಿದ್ದಾರೆ, ಫೆಬ್ರವರಿಯಲ್ಲಿ 6,856,142, ಮಾರ್ಚ್ ತಿಂಗಳಲ್ಲಿ 7,171,163, ಏಪ್ರಿಲ್‌ನಲ್ಲಿ 6,587,264, ಮೇನಲ್ಲಿ 6,290,511, ಜೂನ್‌ನಲ್ಲಿ 6,916,981, ಜುಲೈನಲ್ಲಿ ಗರಿಷ್ಠ 7,681,561, ಆಗಸ್ಟ್‌ನಲ್ಲಿ 6,711,499, ಸೆಪ್ಟೆಂಬರ್‌ನಲ್ಲಿ 4,013,688, ಅಕ್ಟೋಬರ್‌ನಲ್ಲಿ 3,830,643, ನವೆಂಬರ್‌ನಲ್ಲಿ 3,870,403 ಮತ್ತು ಭಕ್ತರು ಭೇಟಿ ನೀಡಿದ್ದಾರೆ. ಪ್ರಸ್ತುತ ತಿಂಗಳಲ್ಲಿ ಸೋಮವಾರದವರೆಗೆ 1,350,000 ಭಕ್ತರು ಭೇಟಿ ನೀಡಿದ್ದಾರೆ.

“ಕಾಶಿ ವಿಶ್ವನಾಥ ಧಾಮ ಪ್ರಾರಂಭವಾದ ಒಂದು ವರ್ಷದಲ್ಲಿ ಭಕ್ತರ ಸಂಖ್ಯೆಯಲ್ಲಿ ಮತ್ತು ಆದಾಯದಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ” ಎಂದು ವಿಭಾಗೀಯ ಆಯುಕ್ತರು ಮತ್ತು ಶ್ರೀ ಕಾಶಿ ವಿಶ್ವನಾಥ ಧಾಮ ವಿಶೇಷ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ.

ಕಾಶಿ ವಿಶ್ವನಾಥ ಧಾಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ವರ್ಮಾ ಅವರು ಭಕ್ತರ ದಟ್ಟಣೆಯಲ್ಲಿ ಭಾರಿ ಏರಿಕೆಯ ಬಗ್ಗೆ ಮಾಹಿತಿ ನೀಡಿ, “ಕಾಶಿ ವಿಶ್ವನಾಥ ಧಾಮ ಅಸ್ತಿತ್ವಕ್ಕೆ ಬರುವ ಮೊದಲು ಪ್ರತಿ ವರ್ಷ ಸರಾಸರಿ 30-40 ಲಕ್ಷ ಭಕ್ತರು ದೇವಾಲಯಕ್ಕೆ ಬರುತ್ತಿದ್ದರು. ಆದರೆ ಧಾಮ ಉದ್ಘಾಟನೆಗೊಂಡ ಬಳಿಕ ಕಳೆದ ವರ್ಷವೊಂದರಲ್ಲೇ ದೇಗುಲಕ್ಕೆ 7.35 ಕೋಟಿ ಭಕ್ತರು ಆಗಮಿಸಿದ್ದಾರೆ” ಎಂದಿದ್ದಾರೆ.

900 ಕೋಟಿ ರೂಪಾಯಿಗಳ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆಯಡಿಯಲ್ಲಿ ಕಾಶಿ ವಿಶ್ವನಾಥ ದೇವಾಲಯದ ಪ್ರದೇಶವನ್ನು 2,700 ಚದರ ಅಡಿಯಿಂದ 5 ಲಕ್ಷ ಚದರ ಅಡಿಗಳಿಗೆ ವಿಸ್ತರಿಸಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ಜಲಸೇನ್, ಮಣಿಕರ್ಣಿಕಾ ಮತ್ತು ಲಲಿತಾ ಘಾಟ್‌ಗಳ ಮೂಲಕ ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ನದಿಯ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top