News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುಜರಾತಿನಲ್ಲಿ ಐತಿಹಾಸಿಕ ಗೆಲುವಿನತ್ತ ಬಿಜೆಪಿ: ಇಂದು ತವರಿಗೆ ಮೋದಿ

2022ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿ ದಾಖಲೆಯ ಏಳನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಸಜ್ಜಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಗುಜರಾತ್‌ನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಬಿಜೆಪಿ ಮೂಲಗಳ ಪ್ರಕಾರ, ಮೊದಲ ಮತ್ತು ಎರಡನೇ ಹಂತದ ಮತದಾನಕ್ಕೂ ಮುನ್ನ ತಮ್ಮ ತವರು ರಾಜ್ಯದಲ್ಲಿ ಹಲವಾರು ಸಮಾವೇಶಗಳನ್ನು ಮತ್ತು ರೋಡ್‌ಶೋಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ಅವರು, ಗೆಲುವಿನ ನಂತರವೂ  ದೊಡ್ಡ ಸಾರ್ವಜನಿಕ ಸಮಾವೇಶವನ್ನು ನಡೆಸಿ ಧನ್ಯವಾದ ಸಮರ್ಪಿಸುವ ನಿರೀಕ್ಷೆಯಿದೆ. ಅವರ ಪಕ್ಷ ಅದ್ಭುತ ಗೆಲುವು ಸಾಧಿಸಲು ಶ್ರಮಿಸಿದ ಕಾರ್ಯಕರ್ತರಿಗೂ ಅವರು ಕೃತಜ್ಞತೆ ತಿಳಿಸಲಿದ್ದಾರೆ.

ಅಲ್ಲದೇ ಗುಜರಾತ್ ಬಿಜೆಪಿಯ ಉನ್ನತ ನಾಯಕರು ಪ್ರಧಾನ ಮಂತ್ರಿಗಳಿಗೆ ಮಾಹಿತಿ ನೀಡಲಿದ್ದಾರೆ ಮತ್ತು ಹೊಸದಾಗಿ ಆಯ್ಕೆಯಾದ ಪಕ್ಷದ ಶಾಸಕರೊಂದಿಗೆ ಸಂವಾದ ನಡೆಸಲಿದ್ದಾರೆ. ಘಟ್ಲೋಡಿಯಾದಲ್ಲಿ ಮುನ್ನಡೆ ಸಾಧಿಸುತ್ತಿರುವ ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ಗೆ ಪಕ್ಷವು ಮತ್ತೆ ಮಣೆ ಹಾಕುವ ನಿರೀಕ್ಷೆ ಇದೆ. ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮರು ಆಯ್ಕೆಯಾಗುವ ಸಾಧ್ಯತೆಯಿದೆ.

30 ಚುನಾವಣಾ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿಯವರ ವರ್ಚಸ್ಸಿನ ಮೇಲೆ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ ಎಂದರೆ ತಪ್ಪಾಗಲಾರದು. ಬಿಜೆಪಿ 1995 ರಿಂದ ಚುನಾವಣೆಯಲ್ಲಿ ಸೋಲದೆ 27 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರೆದಿದೆ. ಇದೀಗ ಮತ್ತೊಮ್ಮೆ ಆಡಳಿತ ವಿರೋಧಿ ಅಲೆಯಿಲ್ಲದೆ ಜಯಿಸಿದೆ.

ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯದಲ್ಲಿ ನಿರೀಕ್ಷಿತ ಭಾರಿ ಗೆಲುವಿನೊಂದಿಗೆ ಅಭಿವೃದ್ಧಿ ಕಾರ್ಯಸೂಚಿಯ ಮೇಲೆ ಕೇಂದ್ರೀಕರಿಸಿದ ಬಿಜೆಪಿ, ಸತತ ಏಳನೇ ಬಾರಿಗೆ ಮರು ಆಯ್ಕೆಯಾಗಿದೆ ಪಶ್ಚಿಮ ಬಂಗಾಳದಲ್ಲಿ ಸತತ ಏಳು ಬಾರಿ ಆಯ್ಕೆಯಾದ ಎಡರಂಗದ ಸಾಧನೆಯನ್ನು ಸರಿಗಟ್ಟಲು ಸಜ್ಜಾಗಿದೆ. ಸಿಪಿಐ(ಎಂ) ನೇತೃತ್ವದ ಫ್ರಂಟ್ 1977 ರಿಂದ 2011 ರವರೆಗೆ 34 ವರ್ಷಗಳ ಕಾಲ ಪಶ್ಚಿಮಬಂಗಾಳದಲ್ಲಿ ಆಳ್ವಿಕೆ ನಡೆಸಿತು.

ಏರುತ್ತಿರುವ ಹಣದುಬ್ಬರ, ನಿಧಾನಗತಿಯ ಬೆಳವಣಿಗೆ, ಆರ್ಥಿಕ ತೊಂದರೆಗಳು ಮತ್ತು ನಿರುದ್ಯೋಗದ ಬಗ್ಗೆ ಪ್ರತಿಪಕ್ಷಗಳು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೂ ಅವರಿಗೆ ಗುಜರಾತ್‌ನಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಕುಂಠಿತಗೊಳಿಸಲಾಗಲಿಲ್ಲ,  ದಶಕಗಳಿಂದಲೂ ಗುಜರಾತ್‌ ಬಿಜೆಪಿ ಪಕ್ಷದ ಭದ್ರಕೋಟೆಯಾಗಿದೆ. 2001 ರಿಂದ 2014 ರವರೆಗೆ ಮೋದಿ ಮುಖ್ಯಮಂತ್ರಿಯಾಗಿ ಬಿಜೆಪಿ ಕೋಟೆಯನ್ನು ಅಲ್ಲಿ ಸದೃಢಗೊಳಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ಗುಜರಾತಿನಲ್ಲಿ ಇನ್ನೆಂದೂ ಏಳಲಾದರದಂತೆ ಮುಗ್ಗರಿಸಿದೆ. ಬಿಜೆಪಿಗೆ ಪ್ರತಿಸ್ಪರ್ಧಿಯಾಗಲು ಹೊರಟ ಎಎಪಿ ನೆಲಕಚ್ಚಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top