ನವದೆಹಲಿ: ಭಯೋತ್ಪಾದನೆ ಜಾಗತಿಕ ಸವಾಲಾಗಿ ಉಳಿದಿದೆ. ಶೂನ್ಯ ಸಹಿಷ್ಣುತೆ ಮತ್ತು ಒಗ್ಗಟ್ಟಿನ ಕ್ರಮದಿಂದ ಮಾತ್ರ ಇದನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಹೇಳಿದ್ದಾರೆ.
ಏಕೀಕೃತ ಮತ್ತು ಶೂನ್ಯ ಸಹಿಷ್ಣುತೆಯ ವಿಧಾನದಿಂದ ಮಾತ್ರ ಭಯೋತ್ಪಾದಯನ್ನು ಸೋಲಿಸಬಹುದು ಎಂದು ಕಾಂಬೋಜ್ ಹೇಳಿದ್ದಾರೆ.
ಭಯೋತ್ಪಾದನೆಯು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಜಾಗತಿಕ ಸವಾಲಾಗಿ ಉಳಿದಿದೆ ಎಂದಿದ್ದಾರೆ.
ಇರಾಕ್ ಕುರಿತ ವಿಶ್ವಸಂಸ್ಥೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಬೋಜ್, 26/11 ದಾಳಿಯ ಬಗ್ಗೆಯೂ ಮಾತನಾಡಿದರು ಮತ್ತು ಭಯೋತ್ಪಾದನೆಯ ಅಮಾನವೀಯ ಕೃತ್ಯಗಳಿಗೆ ನಾವು ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಂಡಾಗ ಮಾತ್ರ ಭಯೋತ್ಪಾದನೆಯ ವಿರುದ್ಧದ ಸಾಮೂಹಿಕ ಹೋರಾಟದ ವಿಶ್ವಾಸಾರ್ಹತೆಯನ್ನು ಬಲಪಡಿಸಬಹುದು ಎಂದು ಭಾರತ ನಂಬುತ್ತದೆ ಎಂದು ಹೇಳಿದರು.
ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಹಣಕಾಸು ಒದಗಿಸುವವರ ವಿರುದ್ಧ ಬಲವಾದ ಕ್ರಮವನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು.
Terrorism in all its forms and manifestations remains a global challenge and only a unified and zero-tolerance approach to terrorism can eventually defeat it: Ruchira Kamboj, Ambassador of India to the United Nations, at the UNSC meeting on Iraq pic.twitter.com/wwidNGCS87
— ANI (@ANI) December 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.