News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೇನಿನ ಸ್ನೇಹ ಸಂಪಾದಿಸಿದ ಜೇನು ಕೃಷಿಕ ಕುಮಾರ ಪೆರ್ನಾಜೆ

ಜೇನುತುಪ್ಪ ತಿನ್ನಲು ಮಾತ್ರ ತುಂಬಾ ಸಿಹಿ. ಆದರೆ ಜೇನುನೊಣಗಳು ಮಾತ್ರ ತುಂಬಾ ಅಪಾಯಕಾರಿ. ಜೇನುನೊಣಗಳು ಕಚ್ಚಿದರೆ ಅದರಿಂದ ವಿಪರೀತ ನೋವಾಗುವುದು ಸಹಜ. ಆದರೆ ಇಂತಹ ಜೇನುನೊಣಗಳು ಮುಖದ ಮೇಲೆ ಗಡ್ಡದಂತೆ ಕುಳಿತು ಬಿಟ್ಟರೆ ಆಶ್ಚರ್ಯಪಡಬೇಡಿ, ಅಭೂತಪೂರ್ವ ಸಾಧನೆ ಮಾಡುತ್ತಿರುವ ಕುಮಾರ ಪೆರ್ನಾಜೆ ಅವರಿಗೆ ಜೇನುನೊಣ ಎಂದರೆ ತುಂಬಾ ಪ್ರೀತಿ. ಅವುಗಳಿಗೂ ಅಷ್ಟೇ ಹಾರಿಬಂದು ಅವರ ಸುತ್ತ ಮುತ್ತುತ್ತವೆ ಅಷ್ಟೇ ಅಲ್ಲ ಮುಖದ ಮೇಲೆಲ್ಲಾ ಹರಿದಾಡುತ್ತವೆ. ಗಡ್ಡದಂತೆ ಗೂಡು ಕಟ್ಟುತ್ತವೆ. ಚಿತ್ರದಲ್ಲಿ ನೋಡಿದರೆ ಅರ್ಥವಾಗುತ್ತದೆ. ಇದೇ ನೋಡಿ ಜೇನು ಮತ್ತು ಪೆರ್ನಾಜೆ ಯವರ ಅಸಲಿ ಪ್ರೀತಿ.

ವಿಭಿನ್ನ ಆಕಾರದಲ್ಲಿ ಕ್ರಿಯಾಶೀಲರಾಗಿ ಅರಳುತ್ತಿರುವ ದಕ ಜಿಲ್ಲೆಯ ಪುತ್ತೂರು ತಾಲೂಕಿನ ನೆ.ಮೂಡ್ನರು ಗ್ರಾಮದ ಕುಮಾರ ಪೆರ್ನಾಜೆ ಕುಟುಂಬವನ್ನು ನೋಡಿದಾಗಲಂತೂ ಜೇನುನೊಣ ಮತ್ತು ಮನುಷ್ಯನ ಇಷ್ಟೊಂದು ಅವಿನಾಭಾವ ಸಂಬಂಧ ಹೊಂದಿದ್ದಾನೆಯೇ ಅನಿಸಿಬಿಡುತ್ತದೆ. ಜೇನುನೊಣ ಅಂದರೆ ಜನರು ಬಹಳ ಹೆದರುತ್ತಾರೆ. ಆದರೆ ಪೆರ್ನಾಜೆ ಕುಟುಂಬದವರು ಅವಿನಾಭಾವ ಸಂಬಂಧದವನ್ನು ಜೇನಿನೊಂದಿಗೆ ಹೊಂದಿ ಜೇನು ಕೃಷಿ ಮಾಡುತ್ತಿದ್ದಾರೆ. ಅದರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಜೇನಿನ ಗೂಡಿಗೆ ಕೈ ಹಾಕಿ ಎಂಥವರನ್ನೂ ಆಶ್ಚರ್ಯಚಕಿತ ಆಗುವಂತೆ ಮಾಡುತ್ತಾರೆ. ಜೇನು ನೊಣದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಇವರ ಕಣ್ಣು-ಕಿವಿ ಮುಖದ ಮೇಲೆ ಹರಿದಾಡಿದರೂ ಜೇನು ನೊಣ ಏನು ಮಾಡುತ್ತಿಲ್ಲ. ಮನಸ್ಸಿನ ನೆಮ್ಮದಿಗಾಗಿ ಆಧುನಿಕ ಬದುಕಿನ ಜಂಜಾಟದಲ್ಲಿ ಅಪಾಯಕಾರಿ ಜೇನುಗೂಡನ್ನು ನೋಡಿ ಬದುಕಬಹುದು ಎನ್ನುತ್ತಾರೆ ಸೌಮ್ಯ ಪೆರ್ನಾಜೆ.

ರಾಣಿಯನ್ನು ಗಲ್ಲದಲ್ಲಿ ಬಿಟ್ಟಾಗ ಮುಖದ ತುಂಬಾ ಆವರಿಸಿ ಬಂದು ಕುಳಿತುಕೊಳ್ಳುತ್ತವೆ. ನಮ್ಮಲ್ಲಿ ತಾಳ್ಮೆ ಮತ್ತು ಸಹನೆ ಇದ್ದರೆ ಒಂದು ಅಭೂತಪೂರ್ವ ಕಲ್ಪನೆ. ಇಂದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿಕೊಳ್ಳುತ್ತದೆ. ಜನರು ಅಂಜಿಕೆಯಿಂದ ಜೇನುಗೂಡಿಗೆ ಬೆಂಕಿಯಿಟ್ಟು ನಾಶಗೊಳಿಸುವ ಸಂಸ್ಕೃತಿ ನಮ್ಮದಾಗದೇ ಅವುಗಳನ್ನು ನಮ್ಮಂತೆ ಬದುಕಲು ಬಿಡಿ ಜೇನಿಗೋಸ್ಕರ ನಾಶಾ ಮಾಡಬೇಡಿರಿ ಎನ್ನುವ ಕುಮಾರ ಅವರ ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರ. ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು ನಾವು ನಡೆದಿದ್ದೆ ದಾರಿ ಆಗಬೇಕು. ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿಯಾಗಬೇಕು, ಮನೆ-ಮನ ಎಲ್ಲಾ ಒಂದು ಮಾಡುವ ಕೆಲಸ ಪೆರ್ನಾಜೆ ಕುಟುಂಬದವರ ಅದ್ಭುತ ಅಪರೂಪದ ಊಹೆಗೂ ನಿಲುಕದ ಜೇನು ಗಡ್ಡದ ಚಿತ್ರಣವಿದೆ. ಪತ್ನಿಯಾದ ಸೌಮ್ಯ ಪೆರ್ನಾಜೆ, ಮಕ್ಕಳಾದ ನಂದನ್ ಕುಮಾರ್, ಚಂದನ್ ಕುಮಾರ್ ಪೆರ್ನಾಜೆ ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಏನಿಲ್ಲ ಎಂಬಂತೆ ಬದುಕುತ್ತಿದ್ದಾರೆ.

ಅವರು ಈಗಾಗಲೇ ಹಲವು ಬಾರಿ ಜೇನು ಗಡ್ಡ ಪ್ರದರ್ಶಿಸಿದ್ದಾರೆ. ಶಾಲಾ ಮಕ್ಕಳಿಗೆ, ರೋಟರಿಕ್ಲಬ್, ಕಾಲೇಜ್ ಮಕ್ಕಳಿಗೆ ಹೀಗೆ ಹಲವಾರು ಕಡೆಗಳಲ್ಲಿ ಜೇನು ಗಡ್ಡ, ಜೇನಿನ ಬಗ್ಗೆ ಸೈಡ್ ಶೋ ಮುಖಾಂತರ ಕಾರ್ಯಗಾರಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗಾಗಲೇ ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಆವಿಷ್ಕಾರಿ ರೈತ, ರೈತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಜಿಲ್ಲಾ ತಾಲೂಕು ಸನ್ಮಾನಗಳನ್ನು ಪಡೆದಿದ್ದಾರೆ. ಗ್ರಾಮೀಣ ಕಲಾ ಪ್ರತಿಭೆಗಳನ್ನು ಒಂದುಗೂಡಿಸಿ ಸ್ವರ ಸಿಂಚನ ಕಲಾತಂಡದಿಂದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದ್ದಾರೆ. ಹಲವಾರು ಸಮಸ್ಯೆಗಳನ್ನು ದಾಟಿ ಬಂದುಹಾಡುಗಾರಿಕೆ ಪ್ರತಿಭೆಗೆ ಅವಕಾಶ ನೀಡಿದ್ದಾರೆ.

ನಾವೆಲ್ಲ ಸಾಧನೆ ಮಾಡಿದಾಗ ಹೆಜ್ಜೆಗುರುತು ಮೂಡಿಸಬೇಕು ಎಂಬಂತೆ ಸಂಗೀತವನ್ನು ಪ್ರಸಾರ ಮಾಡುವುದು ಮತ್ತು ಹೊಸ ಹೊಸ ಸಂಶೋಧನೆ ಇವರ ಹವ್ಯಾಸವಾಗಿದ್ದು ಇದೀಗ ಹನಿ ಪಾರ್ಕ್ (ಜೇನಿನ ಕನಸಿನ ಮನೆ) ಮಾಡುತ್ತಿದ್ದಾರೆ. ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡ ಗುಣವಿರುತ್ತದೆ ವ್ಯಕ್ತಿ ತನಗರಿವಿಲ್ಲದಂತೆ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ಎಂಬುದಕ್ಕೆ ಜೇನು ಗಡ್ಡ ಧಾರಣೆ ಮಾಡಿದ ಇವರೇ ಸಾಕ್ಷಿ. ಇವರ ಇಡೀ ಕುಟುಂಬವೇ ಜೇನು ಗಡ್ಡದ ಕುಟುಂಬ ಹಾಗೆ ಇವರು ಕೋತಿ ಕೋವಿ, ಬೋರ್ಡೋ ದ್ರಾವಣ ಸ್ಪ್ರೈನ್ ಟೆಕ್ನಿಕ್, ಸಿಮೆಂಟ್ ಶೀಟ್ ನಲ್ಲಿ ಜೇನುಪೆಟ್ಟಿಗೆ, ಕೃಷಿವಲಯದಲ್ಲಿ ಹೊಸ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡಿದ್ದಾರೆ. ಲೋಕದ ಜೀವನಾಧಾರವಾದ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡು ಅನಿರತ ಸಾಧನೆಯ ಗರಿಮೆಯನ್ನು ತಮ್ಮದಾಗಿಸಿಕೊಂಡು ಶಿಷ್ಟತೆಯ ಸಾಧಕತನ ಮೆರೆದು ಕೃಷಿಯ ಮಹತ್ಕಾರ್ಯವನ್ನು ಸಾಧಿಸಿ ಜೇನು ಗಡ್ಡ ಕಲೆಯ ಅನನ್ಯ ಸಾಧಕರಾಗಿದ್ದಾರೆ.

ನಿಜವಾಗಿಯೂ ಕೆಲಸ ಮಾಡುವವರಿಗೆ ಅವಕಾಶ ಮತ್ತು ದಾರಿಯಷ್ಟೆ ಕಾಣಿಸುತ್ತದೆ. ಕೆಲಸದಿಂದ ಯಾವಾಗಲೂ ವಿಮುಖರಾಗಲು ಬಯಸುವವರಿಗೆ ನೆಪವಷ್ಟೇ ಕಾಣಿಸುತ್ತದೆ. ಯಶ ಎಂದರೆ ಬಯಸಿದ್ದು ಸಿಗುವುದು ಸುಖವೆಂದರೆ ಸಿಕ್ಕಿದ್ದನ್ನು ಬಯಸುವುದು. ಯಶಸ್ಸು ಆಸೆಯ ಕನಸಲ್ಲ ಪರಿಶ್ರಮದ ಪರಿಣಾಮ ಸಾಧನೆಗೆ ಪ್ರಯತ್ನ ಮುಖ್ಯ. ಸುಮ್ಮನೆ ಕುಳಿತವರಿಗೆ ಯಾವ ಹೆಸರು ಲಭಿಸಲಾರದು ಗುರಿಯನ್ನು ತಲುಪುವ ವರೆಗೂ ಸಾಧನೆ ನಿರಂತರವಾಗಿರಲಿ. ಮನಸ್ಸಿನೊಳಗೆ ಸ್ಪಷ್ಟತೆ ಎನ್ನುವುದು ಸ್ವಾಭಾವಿಕ ಗುಣ ತನಗೆ ಗೊತ್ತಿಲ್ಲದೇ ವ್ಯಕ್ತಿಗಳು ಹೊಸತೇನನ್ನು ಹುಡುಕುತ್ತಾರೆ. ಇದೇ ಹೊಸ ಹೊಸ ಅನ್ವೇಷಣೆಗೆ ಕಾರಣ. ಆದರೆ ಅಷ್ಟೇ ಕ್ರಿಯಾತ್ಮಕ ಶೋಧನೆ ಕನಸುಗಳ ಸಾಧನೆಗೆ ಸಾಧಿಸುವ ಗುರಿ ಮುಖ್ಯ ಬದುಕಿನಲ್ಲಿ ಕನಸು ಕಾಣೋದು ಸುಲಭ ಆದರೆ ಅದನ್ನು ನನಸು ಮಾಡಿಕೊಳ್ಳುವುದೂ ಬಲುಕಷ್ಟ ತ್ಯಾಗ ಪರಿಶ್ರಮ ಇಚ್ಚಾಶಕ್ತಿ ಇರುವ ತಂಡ ಒಂದಿದ್ದರೆ ಯಾವುದನ್ನು ಸಾಧಿಸಲು ಸಾಧ್ಯ.

ಜೇನುತುಪ್ಪ ದಂತಹ ಸಿಹಿಯನ್ನು ಪಡೆಯಬೇಕಿದ್ದರೆ ಜೇನುನೊಣಗಳ ಅಂತೆ ಒಟ್ಟಿಗೆ ಇರುವುದನ್ನು ಕಲಿಯಬೇಕು. ಹೂವಿನಲ್ಲಿರುವ ಮಕರಂದದ ಆಸೆಗೆ ಜೇನುನೊಣವು ಬರುತ್ತದೆ ಇನ್ನಿತರ ನೊಣಗಳು ಬರುತ್ತವೆ ಜೇನುಹುಳಕ್ಕೆ ಸಿಕ್ಕ ಮಕರಂದ ಮಾತ್ರ ಜೇನಾಗಿ ಎಲ್ಲರ ಉಪಯೋಗಕ್ಕೆ ಬರುತ್ತದೆ. ಯೋಗ್ಯನಿಗೆ ಏನೇ ಸಿಕ್ಕರೂ ಅದು ಯೋಗ್ಯತೆಯನ್ನೆ ಪಡೆಯುತ್ತದೆ. ಪ್ರಕೃತಿ ಪ್ರಿಯ, ಪ್ರಾಣಿ ಪ್ರಿಯ, ಜೇನು ಗಡ್ಡದ ವಿಸ್ಮಯ ವ್ಯಕ್ತಿಯ ಸವಿ ಸವಿ ನೆನಪುಗಳು ಬೇಕು. ಹಳ್ಳಿಯ ವಿಶೇಷ ಕುಟುಂಬದ ಹಳ್ಳಿ ಸ್ಪೆಷಲ್ ನಿಮಗೆ ಇಷ್ಟವಾಗಿದೆ.

✍️ಸವಿತಾ ಕೊಡಂದೂರು

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top