ನ್ಯೂಯಾರ್ಕ್: ಭಾರತದೊಂದಿಗಿನ ತನ್ನ ಸಂಬಂಧಗಳಲ್ಲಿ ಮಧ್ಯಪ್ರವೇಶಿಸದಂತೆ ಚೀನಾ ಇತ್ತೀಚೆಗೆ ಅಮೆರಿಕದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಎಂದು ಪೆಂಟಗಾನ್ ಕಾಂಗ್ರೆಸ್ಗೆ ನೀಡಿದ ವರದಿ ತಿಳಿಸಿದೆ.
ಎಲ್ಎಸಿ ಉದ್ದಕ್ಕೂ ಬಿಕ್ಕಟ್ಟಿನ ಗಂಭೀರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವ ಮೂಲಕ ಚೀನಾ ಗಡಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ಘರ್ಷಣೆ ತಗ್ಗಿಸಲು ಮುಂದಾಗಿದೆ. ಈ ಮೂಲಕ ಗಡಿಯಲ್ಲಿನ ಉದ್ವಿಗ್ನತೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಇತರ ಅಂಶಗಳನ್ನು ಹಾನಿಗೊಳಿಸುತ್ತಿರುವುದನ್ನು ತಡೆಯಲು ಅದು ಮುಂದಾಗಿದೆ ಎನ್ನಲಾಗಿದೆ.
ಚೀನಾದ ಮಿಲಿಟರಿ ಅಭಿವೃದ್ಧಿಯ ಕುರಿತು ಪೆಂಟಗನ್ ಕಾಂಗ್ರೆಸ್ಗೆ ನೀಡಿದ ಇತ್ತೀಚಿನ ವರದಿಯಲ್ಲಿ, “ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು ಭಾರತ ಮತ್ತು ಅಮೆರಿಕಾದ ನಡುವೆ ಹೆಚ್ಚು ನಿಕಟ ಪಾಲುದಾರಿಕೆ ನಡೆಯುವುದನ್ನು ತಡೆಯಲು ಗಡಿ ಉದ್ವಿಗ್ನತೆಯನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದೆ. ಚೀನಾದ ಅಧಿಕಾರಿಗಳು ಭಾರತದೊಂದಿಗಿನ ಚೀನಾದ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
ಇದಲ್ಲದೆ, ಚೀನಾ-ಭಾರತದ ಗಡಿಯ ಒಂದು ಭಾಗದಲ್ಲಿ 2021ರಿಂದ ಚೀನಾವು ಸೈನಿಕರ ನಿಯೋಜನೆಯನ್ನು ಮುಂದುವರೆಸಿದೆ ಮತ್ತು LAC ಉದ್ದಕ್ಕೂ ಮೂಲಸೌಕರ್ಯ ನಿರ್ಮಾಣವನ್ನು ಮುಂದುವರೆಸಿತು ಎಂದು ಪೆಂಟಗನ್ ಹೇಳಿದೆ.
ಮೇ 2020 ರಲ್ಲಿ LAC ಉದ್ದಕ್ಕೂ ಚೈನೀಸ್ ಮತ್ತು ಭಾರತೀಯ ಸೈನಿಕರು ಲಾಠಿಗಳನ್ನು ಮತ್ತು ಮುಳ್ಳುತಂತಿಯಿಂದ ಹೊಡೆದಾಡಿ ಘರ್ಷಣೆ ನಡೆಸಿದರು. ನಂತರದ ಬೆಳವಣಿಗೆಯಾಗಿ ಗಡಿಯ ಎರಡೂ ಬದಿಗಳಲ್ಲಿ ಪಡೆಗಳನ್ನು ಹೆಚ್ಚು ಹೆಚ್ಚು ನಿಯೋಜಿಸಲಾಯಿತು. ಇದು ಭಾರತ-ಚೀನಾ ಸಂಬಂಧಗಳಲ್ಲಿ ದೊಡ್ಡ ಬಿರುಕು ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.