ನವದೆಹಲಿ: ವಿವಾದಿತ ಇಸ್ಲಾಮಿಕ್ ನಾಯಕ ಜಾಕಿರ್ ನಾಯ್ಕ್ ಅನ್ನು 2022 ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಉಪನ್ಯಾಸ ನೀಡಲು ಕತಾರ್ ಆಹ್ವಾನಿಸಿದೆ. ಆತನನ್ನು ಆಹ್ವಾನಿಸಿರುವ ಕತಾರ್ ಕ್ರಮಕ್ಕೆ ವ್ಯಾಪ ವಿರೋಧ ವ್ಯಕ್ತವಾಗಿದೆ.
ಭಾರತಕ್ಕೆ ಆತ ಹಲವು ಪ್ರಕರಣಗಳಲ್ಲಿ ಬೇಕಾದ ವ್ಯಕ್ತಿಯಾಗಿದ್ದು, 2016 ರಿಂದ ಭಾರತೀಯ ಅಧಿಕಾರಿಗಳಿಂದ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್ಎಸ್ ಪುರಿ ಅವರು, ಭಾರತವು ಈ ವಿಷಯವನ್ನು ಕತಾರ್ನೊಂದಿಗೆ ಪ್ರಸ್ತಾಪಿಸಲಿದೆ ಎಂದಿದ್ದಾರೆ.
ಅಲ್ಲದೇ ಆತನಿಗೆ ಮಲೇಷ್ಯಾ ದೇಶದ ಪ್ರಜೆ, ಆತನನ್ನು ಬೇರೆ ಯಾರೋ ಎಲ್ಲಿಗೂ ಆಹ್ವಾನಿಸಿದ್ದಾರೆ ಎಂದರೆ ಅದರ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.
2022ರ ಫಿಫಾ ವಿಶ್ವಕಪ್ ಟೂರ್ನಿಗೂ ಮುನ್ನ ಜಾಕಿರ್ ನಾಯಕ್ ಮಲೇಷ್ಯಾದಿಂದ ಕತಾರ್ಗೆ ತೆರಳಿದ್ದ. ನಾಯ್ಕ್ 2017 ರಿಂದ ಮಲೇಷ್ಯಾದಲ್ಲಿ ನೆನೆಸಿದ್ದಾನೆ. ಈ ವಿವಾದಿತ ಬೋಧಕ ಫುಟ್ಬಾಲ್ ಪಂದ್ಯಾವಳಿಯ ಸಮಯದಲ್ಲಿ ಅಲ್ಲಿ ಧಾರ್ಮಿಕ ಉಪನ್ಯಾಸಗಳನ್ನು ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಆತ ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣದ ಆರೋಪ ಎದುರಿಸುತ್ತಿದ್ದಾನೆ ಮತ್ತು ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಎರಡಕ್ಕೂ ಬೇಕಾಗಿದ್ದಾನೆ.
On Zakir Naik being invited by Qatar to give lectures throughout FIFA World Cup tournament, Union Min HS Puri says, "I'm sure India took it up & will take it up. But the point is he's a Malaysian national, you invite him somewhere, whether they knew I've no knowledge of that…" pic.twitter.com/61KFnzY29k
— ANI (@ANI) November 22, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.