ಲಂಡನ್: ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಶುಕ್ರವಾರದಂದು ಇಂಟರ್ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಟೆಂಪಲ್ ಲಂಡನ್ ಮುಖ್ಯಸ್ಥ ವಿಶಾಕ ದಾಸಿ ಅವರಿಗೆ ಪತ್ರ ಬರೆದು ತನಗೆ ಅಭಿನಂದನಾ ಸಂದೇಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಲಂಡನ್ ಇಸ್ಕಾನ್ನ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಭಾರತೀಯ ಮೂಲದ ಯುಕೆ ಪಿಎಂ ರಿಷಿ ಸುನಕ್ ಅವರು, “ನಿಮ್ಮ ಬೆಂಬಲ ಮತ್ತು ತಿಳುವಳಿಕೆಯ ಮಾತುಗಳನ್ನು ನಾನು ತುಂಬಾ ಪ್ರಶಂಸಿಸುತ್ತೇನೆ” ಎಂದು ಹೇಳಿದ್ದಾರೆ.
ಅಲ್ಲದೇ ತಾನು ಭಗವದ್ಗೀತೆಯಿಂದ ಸ್ಪೂರ್ತಿ ಪಡೆದಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ದೇವಾಲಯದಲ್ಲಿ ಗೋವುಗಳಿಗೆ ಆಹಾರ ನೀಡಿದ್ದನ್ನು ನಾನು ಆನಂದಿಸಿದ್ದೇನೆ, ಅದು ತನಗೆ ಅದ್ಭುತವಾದ ದಿನವಾಗಿತ್ತು ಎಂದು ಹೇಳಿದ್ದಾರೆ.
“ಭಗವದ್ಗೀತೆಯಿಂದ ನಾನು ಪಡೆದ ಸ್ಫೂರ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ನಿಮ್ಮ ಅಭಿನಂದನಾ ಸಂದೇಶವು ವಿಶೇಷ ಅನುಭೂತಿಯನ್ನು ಹೊಂದಿದೆ. ನಾವು ಮುಂದೆ ಬರುವ ಕಠಿಣ ನಿರ್ಧಾರಗಳನ್ನು ಛಲದಿಂದ ಎದುರಿಸುತ್ತೇವೆ” ಎಂದು ಸುನಕ್ ಇಸ್ಕಾನ್ನ ವಿಶಾಕ ದಾಸಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಆಗಸ್ಟ್ನಲ್ಲಿ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಇಸ್ಕಾನ್ನ ಭಕ್ತಿವೇದಾಂತ ಮೇನರ್ ದೇವಸ್ಥಾನಕ್ಕೆ ಭೇಟಿ ನೀಡಿದ ಸುನಕ್ ಉಲ್ಲೇಖ ಮಾಡಿದ್ದು, “ಅಕ್ಷತಾ ಮತ್ತು ನಾನು ಆಗಸ್ಟ್ನಲ್ಲಿ ಭಕ್ತಿವೇದಾಂತ ಮ್ಯಾನರ್ನಲ್ಲಿ ನಿಮ್ಮೊಂದಿಗೆ ಜನ್ಮಾಷ್ಟಮಿ ಹಬ್ಬವನ್ನು ಆಚರಿಸುವುದನ್ನು ಸಂಪೂರ್ಣವಾಗಿ ಆನಂದಿಸಿದೆವು. ನಿಮ್ಮ ಆಧ್ಯಾತ್ಮಿಕ ತಾಣಕ್ಕೆ ಭೇಟಿ ಸದಾ ಇರುತ್ತದೆ. ಇದು ಒಂದು ಆಕರ್ಷಕ ಮತ್ತು ಉನ್ನತಿಗೇರಿಸುವ ಅನುಭವ. ಈ ಸಂದರ್ಭದಲ್ಲಿ, 1200 ಸ್ವಯಂಸೇವಕರಲ್ಲಿ ಕೆಲವರನ್ನು ಉದ್ದೇಶಿಸಿ ಮಾತನಾಡಿದ್ದು ವಿಶೇಷವಾಗಿತ್ತು. ದೇವಾಲಯದ ಹಸುಗಳಿಗೆ ಆಹಾರ ನೀಡುವ ಅವಕಾಶವು ಅದ್ಭುತವಾದ ರೀತಿಯಲ್ಲಿ ದಿನವನ್ನು ಪೂರ್ಣಗೊಳಿಸಿತು!” ಎಂದು ಪತ್ರದಲ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.