ನವದೆಹಲಿ: ಉತ್ತರಾಖಂಡ ಸರ್ಕಾರವು ಪತಂಜಲಿ ಫಾರ್ಮಸಿಯ ಐದು ಔಷಧಿಗಳ ಉತ್ಪಾದನೆಯನ್ನು ನಿಷೇಧಿಸಿದೆ. ಈ ಔಷಧಿಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಉಲ್ಲೇಖಿಸಿ ನಿಷೇಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಕಿಡಿಕಾರಿರುವ ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆ, ಆಯುರ್ವೇದ ವಿರೋಧಿ ಔಷಧ ಮಾಫಿಯಾದ ಪಿತೂರಿಯಿಂದಾಗಿ ನಿಷೇಧ ನಡೆದಿದೆ ಎಂದಿದೆ.
ಉನ್ನತ ಪತ್ರಿಕೆಗಳಲ್ಲಿ ನಿಷೇಧದ ವರದಿಗಳು ಬಂದಿವೆ, ಆದರೆ ಆದೇಶದ ಪ್ರತಿಯನ್ನು ಸ್ವೀಕರಿಸಿಲ್ಲ ಎಂದಿರುವ ರಾಮ್ದೇವ್, ಇದರಲ್ಲಿ ಆಯುರ್ವೇದ ವಿರೋಧಿ ಔಷಧ ಮಾಫಿಯಾದ ಕೈವಾಡ ಸ್ಪಷ್ಟವಾಗಿದೆ ಎಂದು ಪತಂಜಲಿ ಸಂಸ್ಥೆ ಹೇಳಿದೆ.
“ಪತಂಜಲಿಯಿಂದ ತಯಾರಾದ ಎಲ್ಲಾ ಉತ್ಪನ್ನಗಳು ಮತ್ತು ಔಷಧಿಗಳನ್ನು ನಿಗದಿತ ಮಾನದಂಡಗಳನ್ನು ಅನುಸರಿಸಿ ತಯಾರಿಸಲಾಗುತ್ತದೆ, ಎಲ್ಲಾ ಶಾಸನಬದ್ಧ ಪ್ರಕ್ರಿಯೆಗಳು ಮತ್ತು ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಮೂಲಕ ಆಯುರ್ವೇದ ಸಂಪ್ರದಾಯದಲ್ಲಿನ 500 ಕ್ಕೂ ಹೆಚ್ಚು ವಿಜ್ಞಾನಿಗಳ ಸಹಾಯದಿಂದ ಅತ್ಯುನ್ನತ ಸಂಶೋಧನೆ ಮತ್ತು ಗುಣಮಟ್ಟವನ್ನು ಹೊಂದಿದೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
“09.11.2022 ರಂದು ಆಯುರ್ವೇದ ಮತ್ತು ಯುನಾನಿ ಸರ್ವೀಸಸ್ ಉತ್ತರಾಖಂಡ್ ಪ್ರಾಯೋಜಿತ ಮಾಧ್ಯಮಗಳಲ್ಲಿ ಬರೆದು ಪ್ರಸಾರ ಮಾಡಲಾದ ಷಡ್ಯಂತ್ರದ ಪತ್ರವನ್ನು ಇದುವರೆಗೆ ಯಾವುದೇ ರೂಪದಲ್ಲಿ ಪತಂಜಲಿ ಸಂಸ್ಥಾನಕ್ಕೆ ಲಭ್ಯವಾಗುವಂತೆ ಮಾಡಲಾಗಿಲ್ಲ” ಎಂದು ಅದು ಹೇಳಿದೆ.
‘‘ಇಲಾಖೆ ತನ್ನ ತಪ್ಪನ್ನು ಸರಿಪಡಿಸಿಕೊಂಡು ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಪತಂಜಲಿ ಸಂಸ್ಥೆಗೆ ಆಗಿರುವ ಸಾಂಸ್ಥಿಕ ನಷ್ಟದ ಪರಿಹಾರದ ಜತೆಗೆ ಈ ಷಡ್ಯಂತ್ರಕ್ಕೆ ಕಾರಣರಾದವರನ್ನು ಶಿಕ್ಷಿಸಲು ಸಂಸ್ಥೆ ಕಾನೂನು ಕ್ರಮ ಕೈಗೊಳ್ಳಲಿದೆ” ಎಂದು ಕಂಪನಿ ಹೇಳಿದೆ.
ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿರುವ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ಪತಂಜಲಿಯ ಶ್ರೇಣಿಯ ಆಯುರ್ವೇದ ಆರೋಗ್ಯ ಉತ್ಪನ್ನಗಳ ಅಡಿಯಲ್ಲಿ ಪ್ರಚಾರ ಮಾಡಲಾದ ಮಧುಗ್ರಿಟ್, ಐಗ್ರಿಟ್, ಥೈರೋಗ್ರಿಟ್, ಬಿಪಿಗ್ರಿಟ್ ಮತ್ತು ಲಿಪಿಡೋಮ್ ಉತ್ಪಾದನೆಯನ್ನು ನಿಲ್ಲಿಸುವಂತೆ ತಯಾರಕರಿಗೆ ಸೂಚಿಸಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.