ಶ್ರೀನಗರ: ಭಾರತ-ಇಸ್ರೇಲ್ ಸಂಬಂಧಗಳು ಹೊಸ ಉತ್ತುಂಗ ತಲುಪುತ್ತಿದೆ. ಆ ರಾಷ್ಟ್ರವು ಜಮ್ಮು ಮತ್ತು ಕಾಶ್ಮೀರದಲ್ಲಿ ಕೃಷಿ ಯೋಜನೆಗಳಿಗಾಗಿ ಎರಡು ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ.
ಈ ಬಗ್ಗೆ ಈಗಾಗಲೇ ಮಾತುಕತೆಗಳು ನಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರದಲ್ಲೇ ಉತ್ಕೃಷ್ಟತೆಯ ಉದ್ದೇಶಿತ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಬೆಳೆ ವೈವಿಧ್ಯತೆಯನ್ನು ಪರಿಚಯಿಸುವುದು, ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಉತ್ತಮಗೊಳಿಸುವುದು ಈ ಕೇಂದ್ರಗಳ ಉದ್ದೇಶ. ಅಲ್ಲದೇ ಇಸ್ರೇಲಿ ಕೃಷಿ-ತಂತ್ರಜ್ಞಾನಗಳು ಮತ್ತು ಜ್ಞಾನವನ್ನು ಹರಡುವ ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೃಷಿಯನ್ನು ಕಾರ್ಯಗತಗೊಳಿಸುವ ಗುರಿ ಹೊಂದಿದೆ.
ಇದರಡಿ ಇಸ್ರೇಲಿ ತಜ್ಞರು ಕೃಷಿ ಗುಣಮಟ್ಟದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ ಮತ್ತು ಇಸ್ರೇಲಿ ಜ್ಞಾನವನ್ನು ಕೃಷಿ ಯೋಜನೆಗೆ ವರ್ಗಾಯಿಸುತ್ತಾರೆ.
ಯೋಜನೆಯ ಅಧಿಕಾರ, ಬಜೆಟ್, ಮತ್ತು ಮೇಲ್ವಿಚಾರಣೆಯೊಂದಿಗೆ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಯೋಜನೆಯಡಿಯಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಜಮ್ಮುವಿನ ಕೃಷಿ ನಿರ್ದೇಶಕ ಕೆಕೆ ಶರ್ಮಾ ತಿಳಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರ ಸೇಬುಗಳು, ವಾಲ್ನಟ್ಗಳು, ಕೇಸರಿ ಮುಂತಾದ ಕೆಲವು ಸ್ಥಾಪಿತ ಬೆಳೆಗಳನ್ನು ಹೊಂದಿದೆ, ಇಲ್ಲಿ ನಾವು ಇಸ್ರೇಲಿ ತಜ್ಞರಿಂದ ಮಾರ್ಗದರ್ಶನ ಪಡೆದು ಈ ಬೆಳೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡುವಂತೆ ಮಾಡಬಹುದು” ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ವ್ಯಾಪಕವಾದ ಯೋಜನೆಗಳನ್ನು ಹೊಂದಿದೆ, ಇದಕ್ಕಾಗಿ ಅದು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪರ್ಧೆಗೆ ಯೋಗ್ಯವಾದ ಬೆಳೆಗಳನ್ನು ಮಾಡಲು ಪರಿಣತಿ ಮತ್ತು ತಾಂತ್ರಿಕ ಮಧ್ಯಸ್ಥಿಕೆಗಳನ್ನು ಬಯಸುತ್ತಿದೆ ಎಂದು ಅವರು ಹೇಳಿದರು.
ಇಸ್ರೇಲಿ ತಂಡವು ಜಮ್ಮು ವಿಭಾಗಕ್ಕೆ ತನ್ನ ಮೂರು ದಿನಗಳ ಭೇಟಿಯನ್ನು ಮುಕ್ತಾಯಗೊಳಿಸಿದೆ ಮತ್ತು ಕಾಶ್ಮೀರ ಕಣಿವೆಯಲ್ಲಿ ಕೇಂದ್ರಗಳ ಸ್ಥಾಪನೆಯನ್ನು ಅನ್ವೇಷಿಸಲು ಕಾಶ್ಮೀರಕ್ಕೂ ಭೇಟಿ ನೀಡುವ ನಿರೀಕ್ಷೆಯಿದೆ.
Israel has always supported India on Kashmir.
And, now, Israel decided to set up 2 centres of excellence in J&K as part of agriculture project.
This comes as a major initiative by Israel after the abrogation of Article 370 and 35A. pic.twitter.com/l6VibZkYz2
— Anshul Saxena (@AskAnshul) November 9, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.