ಉಜೈನಿ: ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲ್ ನಗರವು ಶೀಘ್ರದಲ್ಲೇ ಸೂರ್ಯನ ಪಥದೊಂದಿಗೆ ಸಿಂಕ್ರೊನೈಸ್ ಆಗುವ ವಿಶ್ವದ ಮೊದಲ ವೈದಿಕ ಗಡಿಯಾರವನ್ನು ಹೊಂದಿದ ಹೆಗ್ಗಳಿಕೆ ಪಡೆಯಲಿದೆ. ರಾಜ್ಯ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಅವರು ಉಜ್ಜಯಿನಿಯಲ್ಲಿ 300 ವರ್ಷಗಳಷ್ಟು ಹಳೆಯದಾದ ಜಿವಾಜಿ ವೀಕ್ಷಣಾಲಯಕ್ಕೆ ಭಾನುವಾರ ಭೇಟಿ ಗಡಿಯಾರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. 1719 ರಲ್ಲಿ ಜೈಪುರದ ಮಹಾರಾಜ ಸವಾಯಿ ರಾಜಾ ಜೈಸಿಂಗ್ ಅವರು ಜಿವಾಜಿ ವೀಕ್ಷಣಾಲಯವನ್ನು ನಿರ್ಮಿಸಿದ್ದರು.
ಉಜ್ಜಯಿನಿಯ ಪುರಾತನ ವೈಭವವನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 1.62 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ. (ವಿಕ್ರಮಾದಿತ್ಯ) ವೈದಿಕ ಗಡಿಯಾರವನ್ನು 24 ಮುಹೂರ್ತಗಳಾಗಿ (ಗಂಟೆಗಳು) ವಿಂಗಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಮಧ್ಯಮಗಳೊಂದಿಗೆ ಮಾತನಾಡಿದ ಯಾದವ್, ಈ ಗಡಿಯಾರ ಭಾರತೀಯ ವೇದ ಸಮಯದ ಲೆಕ್ಕಾಚಾರವನ್ನು ಜನರಿಗೆ ಪರಿಚಯಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. “ಈ ವೈದಿಕ ಗಡಿಯಾರದ ಒಂದು ವಿಶೇಷವೆಂದರೆ ಇದು ಸಮಯದ ವೈದಿಕ ಲೆಕ್ಕಾಚಾರವನ್ನು ಆಧರಿಸಿರುತ್ತದೆ, ಇದರಲ್ಲಿ ದಿನದ 24 ಗಂಟೆಗಳನ್ನು ಮುಹೂರ್ತಗಳಾಗಿ ವಿಂಗಡಿಸಲಾಗಿದೆ. ವೈದಿಕ ಗಡಿಯಾರವನ್ನು ಸೂರ್ಯನ ಸ್ಥಾನದೊಂದಿಗೆ ಸಿಂಕ್ ಮಾಡಲಾಗುತ್ತದೆ. ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಗಳು ಇರುತ್ತದೆ” ಎಂದು ಸಚಿವರು ಹೇಳಿದ್ದಾರೆ.
आज उज्जैन में कालगणना की दृष्टि से जन्तर मन्तर पर लगने वाली वैदिक घड़ी का भूमि पूजन किया इस दौरान साथ में महापौर मुकेश टटवाल जी एवं गणमान्य नागरिक मौजूद थे।
उज्जयिनी को वापस कालगणना की दृष्टि से लगभग 300 साल पहले जयपुर के महाराजा जयसिंह ने जन्तर मन्तर का निर्माण कराया था। pic.twitter.com/YloP42mXLq
— Dr Mohan Yadav (@DrMohanYadav51) November 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.