ಮಂಡಿ: ಪುಟ್ಟದಾಗಿರುವ ಮತ್ತು ಲೋಕಸಭೆಗೆ ಕೇವಲ ಮೂರರಿಂದ ನಾಲ್ಕು ಸಂಸದರನ್ನು ಮಾತ್ರ ಕಳುಹಿಸುತ್ತಿದ್ದ ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ಯಾವಾಗಲೂ ಕಡೆಗಣಿಸುತ್ತಾ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ನಾವು ಒಟ್ಟಾಗಿ ಹಿಮಾಚಲವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ, ಹೊಸ ಪರ್ವ ಪ್ರಾರಂಭಿಸುತ್ತೇವೆ ಮತ್ತು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ” ಎಂದು ಮೋದಿ ಹಿಮಾಚಲದ ಸುಂದರನಗರದಲ್ಲಿ ಚುನಾವಣಾ ಸಮಾವೇಶದಲ್ಲಿ ಹೇಳಿದ್ದಾರೆ.
“ಹಿಮಾಚಲ ಪ್ರದೇಶವು ಚಿಕ್ಕ ರಾಜ್ಯವಾಗಿದ್ದು, ಕಾಂಗ್ರೆಸ್ನಿಂದ ಸದಾ ಕಡೆಗಣಿಸಲ್ಪಟ್ಟಿದೆ. ಲೋಕಸಭೆಯಲ್ಲಿ ಮೂರು ನಾಲ್ಕು ಸಂಸದರನ್ನು ಆ ಪಕ್ಷವು ರಾಜಕೀಯವಾಗಿ ಮಹತ್ವವೆಂದು ಪರಿಗಣಿಸಿಲ್ಲ. ಅವರ ಮನಸ್ಥಿತಿಯಿಂದಾಗಿ, ಕಾಂಗ್ರೆಸ್ ಎಂದಿಗೂ ಹಿಮಾಚಲದ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ ಮತ್ತು ಹೀಗಾಗಿ ರಾಜ್ಯವು ಹಿಂದುಳಿದಿದೆ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಮೊದಲ ಹಗರಣವನ್ನು ರಕ್ಷಣಾ ಕ್ಷೇತ್ರದಲ್ಲಿ ಮಾಡಿದೆ ಎಂದು ಆರೋಪಿಸಿ ಮೋದಿ, “ಕಾಂಗ್ರೆಸ್ ತನ್ನ ಆಡಳಿತದಲ್ಲಿ ರಕ್ಷಣಾ ವ್ಯವಹಾರಗಳಲ್ಲಿ ನಿರಂತರ ಕಮಿಷನ್ ಪಡೆಯಿತು. ಅದು ಸಾವಿರಾರು ಕೋಟಿಗಳಷ್ಟು ಹಗರಣಗಳನ್ನು ಮಾಡಿದೆ” ಎಂದು ಅವರು ಹೇಳಿದರು.
सोलन की जनता के अपनेपन और भरपूर स्नेह के लिए कोटि-कोटि धन्यवाद। #DoubleEngineSeVikas https://t.co/GZd06sDDGE
— Narendra Modi (@narendramodi) November 5, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.