News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಯೋತ್ಪಾದಕ ದಾಳಿ: ಕಾಶ್ಮೀರ ತೊರೆದ 10 ಪಂಡಿತರ ಕುಟುಂಬ

ಶ್ರೀನಗರ: ಭಯೋತ್ಪಾದಕರು ಇತ್ತೀಚೆಗೆ ಹಲವಾರು ಉದ್ದೇಶಿತ ಹತ್ಯೆಗಳನ್ನು ನಡೆಸಿರುವ ಕಾರಣ ಭಯಭೀತಗೊಂಡಿರುವ 10 ಕಾಶ್ಮೀರಿ ಪಂಡಿತ ಕುಟುಂಬಗಳು ಭಯದಿಂದ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ತಮ್ಮ ಗ್ರಾಮವನ್ನು ತೊರೆದು ಜಮ್ಮುವಿಗೆ ಪಲಾಯನ ಮಾಡಿದ್ದಾರೆ.

1990 ರ ದಶಕದಲ್ಲಿ ನಡೆದ ಭೀಕರ ಭಯೋತ್ಪಾದನೆಯ ಅತ್ಯಂತ ಕಷ್ಟಕರ ಅವಧಿಯಲ್ಲೂ ಕಾಶ್ಮೀರದಲ್ಲಿ ವಾಸಿಸುತ್ತಿದ್ದ ಮತ್ತು ತಮ್ಮ ಮನೆಗಳನ್ನು ಬಿಡದ ಪಂಡಿತರಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಗಳು ಭಯವನ್ನು ಉಂಟುಮಾಡಿದೆ ಎಂದು ಚೌಧರಿಗುಂಡ್ ನಿವಾಸಿಗಳು ಹೇಳಿದ್ದಾರೆ.

ಅಕ್ಟೋಬರ್ 15 ರಂದು ಶೋಪಿಯಾನ್ ಜಿಲ್ಲೆಯ ಚೌಧರಿಗುಂಡ್ ಗ್ರಾಮದಲ್ಲಿ ಕಾಶ್ಮೀರಿ ಪಂಡಿತ್ ಪುರಾಣ್ ಕ್ರಿಶನ್ ಭಟ್ ಅವರನ್ನು ಅವರ ಪೂರ್ವಜರ ಮನೆಯ ಹೊರಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದರು. ಅಕ್ಟೋಬರ್ 18 ರಂದು, ಮೋನಿಶ್ ಕುಮಾರ್ ಮತ್ತು ರಾಮ್ ಸಾಗರ್ ಅವರು ತಮ್ಮ ಬಾಡಿಗೆ ನಿವಾಸದಲ್ಲಿ ಮಲಗಿದ್ದಾಗ ಭಯೋತ್ಪಾದಕರು  ಗ್ರೆನೇಡ್ ದಾಳಿ ನಡೆಸಿ ಕೊಂದರು.

35 ರಿಂದ 40 ಕಾಶ್ಮೀರಿ ಪಂಡಿತರನ್ನು ಒಳಗೊಂಡ ಹತ್ತು ಕುಟುಂಬಗಳು ಭಯದ ಕಾರಣದಿಂದ ತಮ್ಮ ಗ್ರಾಮದಿಂದ ವಲಸೆ ಹೋಗಿದ್ದಾರೆ” ಎಂದು ಕೊಲೆ ಬೆದರಿಕೆಯನ್ನು ಎದುರಿಸುತ್ತಿರುವ ಚೌಧರಿಗುಂಡ್ ಗ್ರಾಮದ ನಿವಾಸಿಯೊಬ್ಬರು ತಿಳಿಸಿದ್ದಾರೆ.

“ನಾವು ಕಾಶ್ಮೀರ ಕಣಿವೆಯಲ್ಲಿ ವಾಸಿಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ. ಹತ್ಯೆಗಳಿಂದ ಭಯದಲ್ಲಿ ಬದುಕುತ್ತಿದ್ದೇವೆ. ನಮಗೆ ಭದ್ರತೆ ಇಲ್ಲ’ ಎಂದು ಮತ್ತೊಬ್ಬ ಗ್ರಾಮಸ್ಥರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top