News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಲವಂತದ ಮತಾಂತರ: ಮಾಜಿ ಕಾರ್ಪೋರೇಟರ್‌ ಸೇರಿ ಹಲವರ ಬಂಧನ

ಬೆಂಗಳೂರು: ಬೆಚ್ಚಿ ಬೀಳಿಸುವಂತಹ ಮತಾಂತರ ಪ್ರಕರಣವೊಂದು ಬೆಂಗಳೂರಿನಲ್ಲಿ ಬಯಲಾಗಿದೆ.  ಹಿಂದೂ ಯುವಕನನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಿಸಿ ಖತ್ನಾ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾಜಿ ಕಾರ್ಪೊರೇಟರ್ ಸೇರಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಅತಾವರ್ ರೆಹಮಾನ್ ಎಂದು ಹೇಳಲಾಗಿದೆ. ಈತ ಶ್ರೀಧರ್​ ಎಂಬುವವರನ್ನು ಬನಶಂಕರಿಯ ಖಬರಸ್ತಾನ್ ಮಸೀದಿಗೆ ಕರೆದುಕೊಂಡ ಹೋಗಿ ಬಲವಂತದ ಮತಾಂತರ ಮಾಡಿದ್ದಾನೆ ಎನ್ನಲಾಗಿದೆ.

ಮಸೀದಿಯಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದು, ಹಿಂದೂ ಧರ್ಮ, ದೇವರುಗಳ ಬಗ್ಗೆ ಅವಹೇಳನ ಮಾಡಿ, ಯುವಕನ ಮೊಬೈಲ್ ಕಸಿದುಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪ್ರಚೋದನೆ ನೀಡಿದ್ದಾನೆ.

ಶ್ರೀಧರ್​ಗೆ  ನಯಾಜ್ ಪಾಷಾ ಎಂಬಾತ ಖತ್ನಾ ಮಾಡಿದ್ದಾನೆ ಎನ್ನಲಾಗಿದೆ. ಶ್ರೀಧರ್​ಗೆ ದನದ ಮಾಂಸ ತಿನ್ನುವಂತೆ ಒತ್ತಾಯಿಸಿದ ಆರೋಪ ನದೀಮ್ ಖಾನ್ ಎಂಬಾತನ ಮೇಲಿದೆ.

ಅನ್ಸರ್ ಪಾಷಾ, ಸೈಯ್ಯದ್ ದಸ್ತಗಿ, ಮಹಮ್ಮದ್ ಇಕ್ಬಾಲ್, ರಫಿಕ್, ಸಬ್ಬೀರ್, ಖಲೀದ್, ಶಕೀಲ್, ಆಲ್ತಾಫ್ ದನದ ಮಾಂಸ ತಿನ್ನಲು ಒತ್ತಾಯಿಸಿದ ಮತ್ತು ಹಲ್ಲೆ ನಡೆಸಿದ ಹಲವು ಆರೋಪಗಳನ್ನು ಹೊತ್ತಿದ್ದಾರೆ.

 ಶ್ರೀಧರ್ ಪ್ರಕರಣ ಒಂದೇ ಅಲ್ಲದೇ ನೂರಾರು ಮತಾಂತರಗಳು ಇದೇ ರೀತಿ ನಡೆಯುತ್ತಿವೆ ಮತ್ತು ರಾಜ್ಯದಲ್ಲಿ ಮಂತಾತರ ಮಾಡುವ ದೊಡ್ಡ ಜಾಲವೇ ಇದೆ ಎಂಬ ಅನುಮಾನ ವ್ಯಕ್ತವಾಗಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top