News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟಿಎಂಸಿ ಹಿಂದೂಗಳನ್ನು ನಿರ್ಮೂಲನೆ ಮಾಡಲು ಬಯಸಿದೆ: ಬಿಜೆಪಿ ಆರೋಪ

ಕೋಲ್ಕತ್ತಾ: ಮೊಮಿನ್‌ಪುರ ಹಿಂಸಾಚಾರದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ  ಸುವೇಂದು ಅಧಿಕಾರಿ ಅವರು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿಂದೂಗಳನ್ನು ಕೆಲವು ಪ್ರದೇಶಗಳಿಂದ ನಿರ್ಮೂಲನೆ ಮಾಡಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.

“ಟಿಎಂಸಿಯು ಮೋಮಿನ್‌ಪುರ, ಎಕ್ಬಾಲ್‌ಪುರ್ ಮತ್ತು ಖಿದಿರ್‌ಪುರದಿಂದ ಹಿಂದೂಗಳನ್ನು ಹೊರಹಾಕಲು ಬಯಸುತ್ತಿದೆ. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮತ ಬ್ಯಾಂಕ್ ರಾಜಕೀಯ. ಹಿಂದೂ ಮತಗಳು ಬಿಜೆಪಿಯತ್ತ ಹೋಗುತ್ತಿವೆ ಎಂಬ ಭಯದೀಂದ ಸಿಎಂ ಬ್ಯಾನರ್ಜಿ ಬೆದರಿಕೆ ಮತ್ತು ಕೋಮು ಪ್ರಚಾರ ಮಾಡುವ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಮುಂದಾಗುತ್ತಿದ್ದಾರೆ” ಎಂದು ಬಿಜೆಪಿ ಮುಖಂಡನೂ ಆಗಿರುವ ಸುವೇಂದ್ರ ಅಧಿಕಾರಿ ಹೇಳಿದ್ದಾರೆ.

ಈ ಹಿಂದೆ, ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗವರ್ನರ್ ಲಾ ಗಣೇಶನ್ ಅವರಿಗೆ ಪತ್ರ ಬರೆದು ಈ ಪ್ರದೇಶದಲ್ಲಿ ಕೇಂದ್ರೀಯ ಪಡೆಗಳನ್ನು ತುರ್ತು ನಿಯೋಜನೆ ಮಾಡಲು ಒತ್ತಾಯಿಸಿದರು. “ಲಕ್ಷ್ಮಿ ಪೂಜೆಯ ಮುನ್ನಾದಿನದಂದು ಕೋಲ್ಕತ್ತಾದ ಖಿದಿರ್‌ಪೋರ್ ಮೊಮಿನ್‌ಪುರ ಪ್ರದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ನಡೆದಿದೆ” ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಹಿಂಸಾಚಾರದಲ್ಲಿ ಗೂಂಡಾಗಳು ಮತ್ತು ಸಮಾಜ ವಿರೋಧಿಗಳು ಹಿಂದೂಗಳಿಗೆ ಸೇರಿದ ಅನೇಕ ಅಂಗಡಿಗಳು ಮತ್ತು ಬೈಕ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಅವರು ಹೇಳಿದರು. “ಹೌರಾ ಜಿಲ್ಲೆಯ ಉಲುಬೇರಿಯಾ ಪ್ರದೇಶದಲ್ಲಿ ಜೂನ್‌ನಲ್ಲಿ ನಡೆದ ಪಂಚ್ಲಾ ಹಿಂಸಾಚಾರಕ್ಕೆ ಈ ದಾಳಿಯು ಹೋಲಿಕೆಯನ್ನು ಹೊಂದಿದೆ. ಆ ಸಮಯದಲ್ಲಿ, ಹಿಂಸಾಚಾರವು ಪಶ್ಚಿಮ ಬಂಗಾಳದಾದ್ಯಂತ, ವಿಶೇಷವಾಗಿ ನಾಡಿಯಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಹರಡಿತು” ಎಂದು ಅಧಿಕಾರಿ ಪತ್ರದಲ್ಲಿ ಬರೆದಿದ್ದಾರೆ.

ಈ ನಡುವೆ, ಮೋಮಿನ್‌ಪುರ ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಕಲ್ಕತ್ತಾ ಹೈಕೋರ್ಟ್ ಬುಧವಾರ ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿದೆ. ತನಿಖೆಯ ನಂತರ, ಎಸ್‌ಐಟಿ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಇನ್ನು ಮುಂದೆ ಯಾವುದೇ ಹಿಂಸಾಚಾರ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿದೆ.

ಮಿಲಾದ್-ಉನ್-ನಬಿ ಹಬ್ಬಕ್ಕಾಗಿ ಪ್ರದೇಶದಲ್ಲಿ ಹಾಕಲಾದ ಧಾರ್ಮಿಕ ಧ್ವಜಗಳನ್ನು ಹರಿದು ಹಾಕಲಾಗಿದೆ ಎಂದು ಆರೋಪಿಸಿ ಮೊಮಿನ್‌ಪುರದಲ್ಲಿ ಭಾನುವಾರ ಉದ್ವಿಗ್ನತೆ ಉಂಟಾಯಿತು, ಇದು ಶೀಘ್ರದಲ್ಲೇ ಹಲವಾರು ವಾಹನಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುವುದರೊಂದಿಗೆ ಹಿಂಸಾಚಾರಕ್ಕೆ ತಿರುಗಿತು. ಹಿಂಸಾಚಾರವನ್ನು ವಿರೋಧಿಸಿ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ  ಜನರ ಗುಂಪು ಎಕ್ಬಲ್‌ಪೋರ್ ಪೊಲೀಸ್ ಠಾಣೆಯನ್ನು ಸುತ್ತುವರೆದಿದೆ ಎಂದು ವರದಿಗಳು ತಿಳಿಸಿವೆ. ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಂದಿನಿಂದ ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top